ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಆಕ್ರಮಣಗಳ ಬಗ್ಗೆ ಬಿಜೆಪಿ ಮತ್ತೊಮ್ಮೆ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ. ಜೈಲು ಶಿಸ್ತು, ನಿಯಮಗಳು ಎಲ್ಲವೂ ಕುಸಿದು, ಜೈಲು ಈಗ ರೆಸಾರ್ಟ್ ಆಗಿದೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿಯ ಪ್ರಕಾರ, ರೇಪಿಸ್ಟ್ ಗಳು, ಸ್ಮಗ್ಲರ್ ಗಳು, ಉಗ್ರರು ಸೇರಿದಂತೆ ಹಲವು ಅಪರಾಧಿಗಳು ಜೈಲಿನೊಳಗೆ ಬೇಕಾದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಮಾದಕ ವಸ್ತುಗಳಿಂದ ಹಿಡಿದು TV, ಮೊಬೈಲ್, ಇಂಟರ್ನೆಟ್, ಮದ್ಯವರೆಗೆ ಎಲ್ಲವೂ ಖೈದಿಗಳಿಗೆ ಸುಲಭವಾಗಿ ಲಭ್ಯವಾಗುತ್ತಿದೆ. ಜೈಲಿನೊಳಗೆ ಐಟಂ ಸಾಂಗ್, ಪಾರ್ಟಿ, ಮೋಜು ಮಸ್ತಿ ನಡೆಯುತ್ತಿರುವುದರ ಮೂಲಕ ಗೃಹ ಇಲಾಖೆಯ ವೈಫಲ್ಯ ಮತ್ತೊಮ್ಮೆ ಬಯಲಾಗಿದ್ದು, ಗೃಹ ಸಚಿವ ಪರಮೇಶ್ವರ್ ಇದನ್ನು ಅರಿಯದೆ ನಿದ್ರಿಸುತ್ತಿದ್ದಾರೆ ಎಂದು ಬಿಜೆಪಿ ವ್ಯಂಗ್ಯ ಮಾಡಿದೆ.
ಸರ್ಕಾರ ಜೈಲಿನ ಶಿಸ್ತನ್ನು ಸಂಪೂರ್ಣ ಗಾಳಿಗೆ ತೂರಿದೆ, ಜೈಲು ಭದ್ರತೆ ಹೆಸರಿಗೆ ಮಾತ್ರವೇ ಉಳಿದಿದೆ ಎಂದು ಬಿಜೆಪಿ ಆರೋಪಿಸಿದೆ.






