ಚಿಂತಕರನ್ನು, ಪತ್ರಕರ್ತರನ್ನು ಕೊಲೆ ಮಾಡಿದವರು ಬಿಜೆಪಿಗರು : ಶಿವರಾಜ ತಂಗಡಗಿ
ಕೊಪ್ಪಳ : ವಿಧಾನಪರಿಷತ್ ಚುನಾವಣೆ ನಂತರ ಸಿಎಂ ಬೊಮ್ಮಾಯಿ ಬದಲಾವಣೆ ಆಗಲಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ನಾನು ಈಗಾಗಲೇ ಒಮ್ಮೆ ಬೊಮ್ಮಾಯಿ ಅವರನ್ನು ಬದಲಾವಣೆ ಮಾಡುತ್ತಾರೆ ಅಂತಾ ಹೇಳಿದ್ದೆ. ಅವರಲ್ಲಿ ಒಡಕು ಇದೆ ಒಗ್ಗಟ್ಟು ಇಲ್ಲ ಸಿಎಂ ಬದಲಾವಣೆ ನಿಶ್ವಿತ ಎಂದು ಪುನರುಚ್ಚರಿಸಿದರು.
ಸಿದ್ದರಾಮಯ್ಯ ಕುಡುಕ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ತಂಗಡಗಿ, ಈಶ್ವರಪ್ಪ ಅಣ್ಣ ಮುಖ ನೋಡಿದ್ರೆ ಕುಡಿದವರಂತೆ ಕಾಣುತ್ತಾರೆ.
ಸಿದ್ದರಾಮಯ್ಯ ಅವರ ಬಗ್ಗೆ ಏನ್ ಹೇಳ್ತಾರೆ. ಈಶ್ವರಪ್ಪ ಅವರ ಮುಖ ನೋಡಿದ್ರೆ, ದೊಡ್ಡ ಕುಡುಕರು ಕಂಡಂತೆ ಕಾಣುತ್ತಾರೆ ಅಂತಾ ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಗರು ಭಯೋತ್ಪಾದಕರು ಎನ್ನುವ ಬಿಜೆಪಿ ಕೆಲ ನಾಯಕರ ಹೇಳಿಕೆಗೆ ಟಾಂಗ್ ನೀಡಿದ ತಂಗಡಗಿ, ಭಯೋತ್ಪಾದಕರನ್ನು ಹುಟ್ಟಹಾಕುವ ಪಕ್ಷ ಬಿಜೆಪಿನೋ ಕಾಂಗ್ರೆಸ್ ನೋ ಗೊತ್ತಾಗಿದೆ.
ಕಲ್ಬುರ್ಗಿ ಕವಿನ ಕೊಲೆ ಮಾಡಿದ್ದು ಯಾರು? ಗೌರಿ ಲಂಕೇಶ್ ಪತ್ರಕರ್ತ ಮಹಿಳೆಯನ್ನು ಕೊಲೆ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು.
ಬಿಜೆಪಿ ಭಯೋತ್ಪಾದಕರಷ್ಟೆ ಅಲ್ಲ ಬಿಜೆಪಿಗರು ಕೊಲೆಗಡುಕರು ಕೂಡ ಹೌದು. ಮಹಾನ್ ವ್ಯಕ್ತಿಗಳನ್ನ ಚಿಂತಕರನ್ನು, ಪತ್ರಕರ್ತರನ್ನು ಕೊಲೆ ಮಾಡಿದವರು ಬಿಜೆಪಿಗರು.
ಭಯೋತ್ಪಾಕರನ್ನು ಸೃಷ್ಟಿ ಮಾಡಿದವರು ಇವರೇ ವಿಶೇಷವಾಗಿ ನಳೀನ್ ಕುಮಾರ್ ಕಟೀಲ್ ಅವರು ಅಂತಾ ಆರೋಪಿಸಿದರು.