ನಿತಿನ್ ಸಿನಿಮಾದಿಂದ ಕಾಮಿಡಿ ಕಿಂಗ್ ಬ್ರಹ್ಮಾನಂದಂ ಔಟ್…!
ಕಾಮಿಡಿ ಲೆಜೆಂಡ್ ಬ್ರಹ್ಮಾನಂದಂ ಅವರು ಗೊತ್ತಿಲ್ಲದ ಭಾರತೀಯ ಸಿನಿಮಾ ಪ್ರೇಕ್ಷಕರು ಬಹುಶಃ ಇಲ್ಲ..ಬಾಲಿವುಡ್ ನಲ್ಲೂ ಬ್ರಹ್ಮಾನಂದಂ ಫೇಮಸ್.. ಅದ್ರಲ್ಲೂ ದಕ್ಷಿಣ ಭಾರತೀಯರಿಗಂತೂ ಈ ಕಾಮಿಡಿ ಕಿಂಗ್ ಬಗ್ಗೆ ಗೊತ್ತೇ ಗೊತ್ತಿದೆ.. ಬ್ರಹ್ಮಾನಂದಂ ಡೈಲಾಗ್ ಹೇಳೋದ್ ಬೇಡ, ಆಕ್ಟ್ ಮಾಡೋದ್ ಬೇಡ ಸುಮ್ನೆ ತೆರೆ ಮೇಲೆ ಕಾಣಿಸಿಕೊಂಡ್ರೆ ಸಾಕು ಜನ ಬಿದ್ದು ಬಿದ್ದು ನಗುತ್ತಾರೆ.. ಶಿಲ್ಲೆಗಳನ್ನ ಹೊಡೀತಾರೆ.. ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯ ನಟರ ಪೈಕಿ ಬ್ರಹ್ಮಾನಂದಂ ಟಾಪ್ ನಲ್ಲಿದ್ದಾರೆ. ಕಳೆದ 30 ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ನಂಬರ್ ಒನ್ ಹಾಸ್ಯನಟನಾಗಿರುವ ಬ್ರಹ್ಮಾನಂದಂವರಿಗೆ ಸಾಟಿ ಮತ್ತೊಬ್ಬರಿಲ್ಲ..
ಬ್ರಹ್ಮಾನಂದಂ ಅವರಿಗೆ ಇರುವ ಡಿಮ್ಯಾಂಡ್ ಮಾತ್ರ ಇಂದಿಗೂ ಕಡಿಮೆಯಾಗಿಲ್ಲ..
ಆದ್ರೆ ಕೆಲ ಸಮಯದಿಂದ ಅವರು ಸಿನಿಮಾಗಳನ್ನ ಮಾಡುವುದು ಕಡಿಮೆಯಾಗಿದೆ.. ಅವರಿಗೆ 60 ವರ್ಷ ದಾಟಿದೆ.. ಅವರು ಇತ್ತೀಚೆಗೆ ‘ಮಾಚರ್ಲಾ ನಿಯೋಜಕವರ್ಗಮ್’ ಎಮಬ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ನಿತಿನ್ ನಾಯಕನಾಗಿದ್ದಾರೆ. ರಾಜಶೇಖರ್ ಆಕ್ಷನ್ ಕಟ್ ಹೇಳ್ತಿದ್ದಾರೆ… ಇನ್ನು ಈ ಚಿತ್ರಕ್ಕೆ ನಿತಿನ್ ಬಂಡವಾಳ ಹೂಡ್ತಿದ್ದಾರೆ.
52ನೇ ಗೋವಾ ಅಂತರಾಷ್ಟ್ರೀಯ ಸಿನಿಮೋತ್ಸವ : 15 ಸಿನಿಮಾಗಳು ಎಂಟ್ರಿ..! ಅದ್ರಲ್ಲಿ 3 ಭಾರತೀಯ ಸಿನಿಮಾಗಳು…
ಈ ಚಿತ್ರದಲ್ಲಿ ಬ್ರಹ್ಮಾನಂದಂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.. ಆದ್ರೆ ಈ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸುದ್ದಿ ಒಂದು ಹರಿದಾಡ್ತಿದ್ದು, ಇದು ಬ್ರಹ್ಮಾನಂದಂ ಅವರ ಅಭಿಮಾನಿಗಳನ್ನ ಕೆರಳಿಸಿದೆ.. ಬ್ರಹ್ಮಾನಂದಂ ಅಭಿಮಾನಿಗಳು ನಾಯಕ ನಟ ನಿತಿನ್ ವಿರುದ್ಧ ಕೆಂಡ ಕಾರುತ್ತಿದ್ದಾರೆ..
ಹೌದು.. ಬ್ರಹ್ಮಾನಂದಂ ಅವರನ್ನು ಸಿನಿಮಾದಿಂದ ನಿತಿನ್ ತೆಗೆದು ಹಾಕಿದ್ದಾರೆ ಎನ್ನಲಾಗ್ತಿದೆ.. ಈ ಸುದ್ದಿ ಟಾಲಿವುಡ್ ನಲ್ಲಿ ಹಲ್ ಚಲ್ ಎಬ್ಬಿಸಿದೆ. ಅಲ್ಲದೇ ಇದಕ್ಕೆ ಕಾರಣವೇನೆಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ..
ಇನ್ನೂ ವರದಿಯೊಂದರ ಪ್ರಕಾರ ಈ ಚಿತ್ರದ ಶೂಟಿಂಗ್ ಗಾಗಿ ಚಿತ್ರತಂಡ ವೈಜಾಗ್ ಗೆ ತೆರಳಿದ್ದು, ನಿತಿನ್ ಜೊತೆಗೆ ಬ್ರಹ್ಮಾನಂದಂ ಈ 10 ದಿನಗಳ ಶೂಟಿಂಗ್ ಶೆಡ್ಯೂಲ್ ನಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಅಂದುಕೊಂಡ ಸಮಯಕ್ಕೆ ಬ್ರಹ್ಮಾನಂದಂ ಶೂಟಿಂಗ್ ಗೆ ಆಗಮಿಸದೇ ಇದ್ದದಕ್ಕೆ ಅವರನ್ನ ಚಿತ್ರದಿಂದ ಹೊರ ಹಾಕಲಾಗಿದೆ ಎಂದು ಹೇಳಲಾಗ್ತಿದೆ ಆದ್ರೂ ಸಿನಿಮಾತಂಡ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ನೀಡಿಲ್ಲ.. ಒಂದ್ ವೇಳೆ ಈ ಸುದ್ದಿ ನಿಜವೇ ಆದ್ರೆ ಬ್ರಹ್ಮಾನಂದಂ ಅವರ ಅವರ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಲಿದೆ.. ಜೊತೆಗೆ ಅಭಿಮಾನಿಗಳು ಸಿನಿಮಾತಂಡದ ವಿರುದ್ಧ ತಿರುಗಿಬೀಳಬಹುದು..
ಇನ್ನೂ ಬ್ರಹ್ಮಾನಂದಂ ಅವರು ಈ ಸಿನಿಮಾಗಾಗಿ ದಿನಕ್ಕೆ 5 ಲಕ್ಷ ರೂಗಳಂತೆ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದು ಅಷ್ಟು ಹಣವನ್ನು ನಿತಿನ್ ಮುಂಗಡವಾಗಿ ಪಾವತಿಸಿದ್ದಾರೆ ಎಂದು ಹೇಳಲಾಗ್ತಿದೆ.