ಬ್ರಹ್ಮಾವರ : ಮಹಿಳೆಯ ಕೊಲೆ, ಸ್ಥಳಕ್ಕೆ ಪೊಲೀಸರ ಭೇಟಿ
ಉಡುಪಿ : ಬ್ರಹ್ಮಾವರದ ಕುಂಬ್ರಗೋಡು ಬಳಿ ಮಹಿಳೆಯ ಕೊಲೆ ನಡೆದಿದೆ. ಮೇಲ್ನೋಟಕ್ಕೆ ಇದು ಚಿನ್ನದ ಆಸೆಗೆ ಮಾಡಲಾದ ಕೊಲೆ ಎಂದು ತಿಳಿದುಬಂದಿದೆ. ವಿಶಾಲ ಗಾಣಿಗ (35) ಮೃತ ಮಹಿಳೆಯಾಗಿದ್ದಾರೆ.
ವಿಶಾಲ ಗಾಣಿಗ ಬ್ರಹ್ಮಾವರದ ಕುಂಬ್ರಗೋಡು ಬಳಿಇರುವ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ಆದ್ರೆ ನಿನ್ನೆ ರಾತ್ರಿ ಅವರು ಹತ್ಯೆಕ್ಕೀಡಾಗಿದ್ದು, ಸ್ಥಳಕ್ಕೆ ಬ್ರಹ್ಮವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಯರ್ ಮತ್ತು ದಿಂಬಿನಿಂದ ವಿಶಾಲ ಗಾಣಿಗ ಅವರನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.