ಮುಹೂರ್ತದ ವೇಳೆ ಕರೆಂಟ್ ಕಟ್ – ವಧು ಅದಲು ಬದಲಾಗಿ ಮದುವೆ….
ಅಕ್ಕನಿಗೆ ನಿಶ್ಚಯವಾಗಿದ್ದ ವರ ತಂಗಿಯೊಂದಿಗೆ, ತಂಗಿಗೆ ನಿಶ್ಚಯವಾಗಿದ್ದ ವರ ಅಕ್ಕನೊಂದಿಗೆ ಮದುವೆಯಾಗಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.
ಈ ಅದಲು ಬದಲಿಗೆ ಕಾರಣವಾಗಿದ್ದು ವಿದ್ಯುತ್ ವ್ಯತ್ಯಯ, ಮದುವೆ ಮುಹೂರ್ತದ ವೇಳೆ ಕರೆಂಟ್ ಹೋಗಿದ್ದು, ಅಕ್ಕನಿಗೆ ನೋಡಿದ್ದ ವರ ತಂಗಿಗೆ, ತಂಗಿಗೆ ನೋಡಿದ್ದ ಅಕ್ಕನಿಗೆ ತಾಳಿ ಕಟ್ಟಿದ್ದಾರೆ.
ರಮೇಶ್ಲಾಲ್ ಅವರ ಇಬ್ಬರು ಪುತ್ರಿಯರಾದ ನಿಕಿತಾ ಮತ್ತು ಕರಿಷ್ಮಾಗೆ ಬೇರೆ, ಬೇರೆ ಊರಿನ ಯುವಕರಾದ ದಂಗ್ವಾರಾ ಭೋಲಾ ಮತ್ತು ಗಣೇಶ್ ಅವರೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಭಾನುವಾರ ಮುಹೂರ್ತದ ವೇಳೆ ಕರೆಂಟ್ ಕಟ್ ಹೋಗಿದ್ದು, ಅಕ್ಕ, ತಂಗಿ ಇಬ್ಬರು ಒಂದೇ ಬಣ್ಣದ ಉಡುಪು ತೊಟ್ಟಿದ್ದರಿಂದ ಅದಲು ಬದಲಾಗಿ ಮದುವೆ ನಡೆದು ಬಿಟ್ಟಿದೆ.
ಇವರರಿಬ್ಬರೂ ತಮ್ಮ ಪತ್ನಿಯನ್ನ ಮನೆಗೆ ಕರೆದೋಯ್ದ ನಂತರವೇ ವಧು ಅದಲು ಬದಲಾಗಿರುವುದು ತಿಳಿದುಬಂದಿದೆ. ನಂತರ ಮೂರೂ ಕುಟುಂಬಗಳು ಕುಳಿತು ಮಾತನಾಡಿ ಮತ್ತೊಮ್ಮೆ ನಿಶ್ಚಿತ ವರನೊಂದಿಗೆ ಮದುವೆ ಮಾಡಿ ನಿಖಿತಾ ಕರೀಶ್ಮಾ ಅವರನ್ನ ಗಂಡನ ಮನೆಗೆ ಕಳುಹಿಸಿಕೊಡಲಾಗಿದೆ.