ನಡದೇ ಹೋಯಿತು ಮರ್ಯಾದೆ ಹತ್ಯೆ
ಉತ್ತರ ಪ್ರದೇಶ : ಮನೆತನದ ಗೌರವಕ್ಕಾಗಿ ಸ್ವತಃ ಸಹೋದರಿಯನ್ನು ಸಹೋದರ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಭೋಜ್ಪುರದ ರಾಣಿನಾಗಲ್ ಗ್ರಾಮದಲ್ಲಿ ನಡೆದಿದೆ.
ನೀಲಂ ಮೃತ ದುರ್ದೈವಿಯಂದು ಗುರುತಿಸಲಾಗಿದೆ. ಸಹೋದರ ಸುಭಾಷ್ ಕೊಲೆ ಆರೋಪಿ ಎಂದು ಗುರುತಿಸಲಾಗಿದೆ. ಯುವತಿ ನೀಲಂ ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದಕ್ಕೆ ಸೋಹದರ, ಸಹೋದರಿಯನ್ನು ಕೊಲೆ ಮಾಡಿದ್ದಾನೆ.
ನಡೆದಿದ್ದೇನು ?; ರಾಣಿನಾಗಲ್ ಗ್ರಾಮದ ನಿವಾಸಿ ನೀಲಂ ಅದೇ ಗ್ರಾಮದ ನಿವಾಸಿ ಯುವಕ ಮೋಹಿತ್ ಯಾದವ್ನ್ನು ಪ್ರೀತಿಸುತ್ತಿದ್ದಳು. ಆದರೆ ಯುವಕ ಮೋಹಿತ್ ಯಾದವ್ ಅನ್ಯ ಜಾತಿಯವನಾಗಿದ್ದನು. ಈ ವಿಷಯವನ್ನು ತಿಳಿದ ಕುಟುಂಬಸ್ಥರು ಯುವತಿಗೆ ತಿಳಿ ಹೇಳಿದ್ದಾರೆ.
ಆದರೆ ಯುವತಿ ಇದಕ್ಕೆ ಒಪ್ಪಿಲ್ಲ. ಹೀಗಾಗಿ ನೀಲಂ ತಂದೆ ಯುವತಿವನ್ನು ಬೇರೆ ಕಡೆ ಮದುವೆ ಮಾಡಲು ಮುಂದಾಗಿದ್ದಾರೆ. ಇದನ್ನು ತಿಳಿದ ಯುವತಿ ನೀಲಂ ತಾನು ಪ್ರೀತಿ ಮಾಡುತ್ತಿದ ಯುವಕನ ಮನೆಗೆ ಹೋಗಿ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾಳೆ.
ಇದರಿಂದ ಕೋಪಗೊಂಡಿರುವ ಸಹೋದರ ಸುಭಾಷ್ ಆಕೆಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ಪ್ರಿಯಕರನ ತಂದೆ, ಯುವತಿಯ ತಂದೆ ಹಾಗೂ ಸಹೋದರನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.