ಉತ್ತರಪ್ರದೇಶ : ಬಸ್ ಅಪಘಾತ – 14 ಜನರಿಗೆ ಗಂಭೀರ ಗಾಯ
ಉತ್ತರಪ್ರದೇಶ: ಖಾಸಗಿ ಬಸ್ ಒಂದು ರಸ್ತೆಯಲ್ಲಿ ಉರುಳಿಬಿದ್ದು, ಅಪಘಾತದಲ್ಲಿ 14 ಜನರಿಗೆ ಗಂಭೀರ ಗಾಯವಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಬಸ್ ನಲ್ಲಿ ಒಟ್ಟು 100 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ವೇಳೆ ಬಸ್ ಆಗ್ರಾದ ಬಳಿಯ ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ಉರುಳಿಬಿದ್ದಿದೆ.
ಸಚಿವ ಸುಧಾಕರ್ ಮನೆ ಮುಂದೆಯೇ ಹೊಡೆದಾಡಿಕೊಂಡ ಡ್ರೈವರ್ – ಗನ್ ಮ್ಯಾನ್..!
ಗ್ರೇಟರ್ ನೋಯ್ಡಾ ಮತ್ತು ಆಗ್ರಾದ ನಡುವಿನ ಸಂಪರ್ಕ ಸೇತುವೆಯಂತಿರುವ ರಸ್ತೆ ಇದಾಗಿದೆ. ಇನ್ನೂ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಪ್ರಯಾಣಿಕರನ್ನು ತುಂಬಿಸಿಕೊಂಡು ಖಂಡೌಲಿ ಪ್ರದೇಶದಲ್ಲಿರುವ ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ಪ್ರಯಾಣ ಬೆಳೆಸುವ ವೇಳೆ ರಸ್ತೆಯ ಬದಿ ಉರುಳಿದ ಪರಿಣಾಮ ಅಪಘಾತಕ್ಕೆ ಈಡಾಗಿದೆ.