ಖಡ್ಗದಿಂದ ಕೇಕ್ ಕಟ್ಟಿಂಗ್ : ಟೀಕೆಗೆ ಗುರಿಯಾದ ಬಳಿಕ ಕ್ಷಮೆಯಾಚಿಸಿದ ‘ಸೇತುಪಥಿ’
ತಮಿಳುನಾಡು: ತಮಿಳು ನಟ ವಿಜಯ ಸೇತುಪಥಿ ಅವರು ಇತ್ತೀಚೆಗಷ್ಟೇ ಬರ್ತ್ ಡೇ ಆಚರಸಿಕೊಂಡಿದ್ದರು. 43ನೇ ವಸಂತಕ್ಕೆ ಕಾಲಿಟ್ಟ ನಟ ಹುಟ್ಟುಹಬ್ಬದ ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡಿಕೊಂಡಿದ್ದರು. ಅಲ್ಲದೇ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆದ್ರೆ ಈ ಪೋಸ್ಟ್ ವ್ಯಾಪಕ ಟಿಕೆಗೆ ಗುರಿಯಾಗಿದೆ.
ವಿಜಯ್ ತನ್ನಮುಂದಿನ ಸಿನೆಮಾ ತಂಡದೊಂದಿಗೆ ಬರ್ತ್ ಡೇ ಆಚರಸಿಕೊಂಡಿದ್ರು. ಈ ವೇಳೆ ಕೇಕ್ ಅನ್ನ ಖಡ್ಗದಿಂದ ಕಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ವೈರಲ್ ಆಗ್ತಿದ್ದಂತೆ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಇದೀಗ ವಿಜಯ್ ಸೇತುಪತಿ ಈ ವಿಚಾರವಾಗಿ ಕ್ಷಮೆಯಾಚಿಸಿದ್ದಾರೆ.
ನಿಮಗೆ ಗೊತ್ತಾ…? 2020ರಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ಖಾದ್ಯ ಯಾವುದು..!
ಖಡ್ಗದಿಂದ ಹುಟ್ಟುಹಬ್ಬದ ಕೇಕನ್ನು ಕತ್ತರಿಸಿ ತಪ್ಪುಸಂದೇಶ ರವಾನಿಸಿದ್ದಕ್ಕೆ ನೆಟ್ಟಿಗರಿಂದ ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ಇದಕ್ಕೆ ಪ್ರತಿಕ್ರಿಯಿಸಿ ಟ್ವಿಟ್ ಮಾಡಿರೋ ಸೇತುಪತಿ ‘ನನ್ನ ಜನ್ಮದಿನಕ್ಕೆ ಶುಭ ಹಾರೈಸಿದ ಎಲ್ಲ ಪ್ರಸಿದ್ಧ ವ್ಯಕ್ತಿಗಳು ಹಾಗೂ ಅಭಿಮಾನಿಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಮೂರು ದಿನಗಳ ಹಿಂದೆ ನನ್ನ ಕಚೇರಿಯಲ್ಲಿ ತೆಗೆದ ಫೋಟೊ ಚರ್ಚೆಗೆ ಕಾರಣವಾಗಿದೆ. ನಾನು ಇದೀಗ ಪೊನ್ ರಾಮ್ ಸರ್ ಅವರ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿರುವೆ.
ಈ ಸಿನೆಮಾದಲ್ಲಿ ಖಡ್ಗ ಅತ್ಯಂತ ಮುಖ್ಯ ಪಾತ್ರವಾಗಿ ಕಂಡುಬರುತ್ತದೆ. ಹೀಗಾಗಿ ನಾನು ಸಿಬ್ಬಂದಿಯೊಂದಿಗೆ ಕೇಕ್ ಕತ್ತರಿಸಿದ್ದೇನೆ. ಇದು ತಪ್ಪು ಪೂರ್ವ ನಿದರ್ಶನವನ್ನು ನೀಡುತ್ತದೆ ಎಂದು ಹಲವರು ಹೇಳಿದ್ದಾರೆ. ಇನ್ನು ನಾನು ಈ ವಿಷಯಗಳ ಬಗ್ಗೆ ಜಾಗರೂಕತನಾಗಿರುತ್ತೇನೆ. ಈ ರೀತಿ ಮಾಡಿದ್ದು ಯಾರಿಗಾದರೂ ನೋವುಂಟು ಮಾಡಿದ್ದರೆ, ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ’ ಎಂದು ಬರೆದುಕೊಳ್ಳುವ ಮೂಲಕ ಕ್ಷಮೆಯಾಚಿಸಿದ್ದಾರೆ.
ಅಂದ್ಹಾಗೆ ಇತ್ತೀಚೆಗಷ್ಟೇ ವಿಜಯ್ ಸೇತುಪತಿ ಖಡಕ್ ವಿಲ್ಲನ್ ಆಗಿ ನಟಿಸಿರುವ ದಳಪತಿ ವಿಜಯ್ ನಾಯಕನಾಗಿರುವ ಮಾಸ್ಟರ್ ಸಿನಿಮಾ ರಿಲೀಸ್ ಆಗಿ ಸಖತ್ ಸೌಂಡ್ ಮಾಡ್ತಿದೆ. ಈ ಸಿನಿಮಾದಲ್ಲಿ ಸೇತುಪತಿ ಪ್ಯೂರ್ ಡೆವಿಲ್ ಲುಕ್ ಗೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel