ಸಿಡಿ ಕೇಸ್ : ಪ್ರಕರಣವನ್ನ ಎಲ್ಲರೂ ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದಾರೆ. ಯಾರಿಗೂ ಗಂಭೀರತೆ ಇಲ್ಲ – ಹೆಚ್ ಡಿಕೆ
ಮೈಸೂರು : ರಮೇಶ್ ಜಾರಕಿಹೋಳಿ ಸಿಡಿ ಕೇಸ್ ನಲ್ಲಿ ಡಿಕೆಶಿ ಹೆಸರು ಕೇಳಿಬಂದಿದೆ ಎಂಬ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅವರೇ ಮಾಡಿದ್ದಾರೆ ಅಂತ ಯಾರಾದ್ರು ಹೇಳಿದ್ರಾ. ರಾಜ್ಯದಲ್ಲಿ ಎಷ್ಟು ಜನ ಮಹಾನ್ ನಾಯಕರು ಇಲ್ಲ. ಬಿಜೆಪಿಯಲ್ಲೇ ಒಬ್ಬರು ಮಹಾನ್ ನಾಯಕರು ಬೆಳಿತಿದ್ದಾರೆ. ಯಾವ ಮಹಾನ್ ನಾಯಕರು ಅಂತ ಹೇಳಿದ್ದಾರೆ ಗೊತ್ತಿಲ್ಲ. ಇವರು ತಾವೆ ಅಂತ ಯಾಕೆ ಅಂದುಕೊಂಡ್ರು ಗೊತ್ತಿಲ್ಲ.
ಸಿಡಿ ಪ್ರಕರಣ : ಬ್ಲಾಕ್ ಮೇಲ್ ಮಾಡುವ ರಾಜಕಾರಣಿಗಳನ್ನು ಜೈಲಿಗೆ ಅಟ್ಟಬೇಕು – ಯತ್ನಾಳ್..!
ಡಿಕೆ.ಶಿವಕುಮಾರ್ ಬಹಳ ಮೆಚುರ್ಡ್ ಪೊಲಿಟಿಶಿಯನ್. ಅವರಿಗೆ ಇರುವ ಅನುಭವ ನಮಗೂ ಇಲ್ಲ. ನಿನ್ನೆ ದುಡುಕಿ ಅವರ ಹೆಸರನ್ನ ಅವರೇ ಹೇಳಿದ್ದಾರೆ. ಯಾಕೆ ಈ ಪ್ರಕರಣಕ್ಕೆ ಅವರ ಹೆಸರು ಸಿಲುಕಿಸಿಕೊಳ್ಳಲು ಹೊರಟಿದ್ದಾರೆ ಗೊತ್ತಿಲ್ಲ. ಈ ಪ್ರಕರಣವನ್ನ ಎಲ್ಲರೂ ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದಾರೆ. ಯಾರಿಗೂ ಗಂಭೀರತೆ ಇಲ್ಲ. ಇದರಿಂದ ರಾಜ್ಯದ ಗೌರವ ಹಾಳಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಿಡಿ ಪ್ರಕರಣ : ತನಿಖೆಯಾಗಿ ಸತ್ಯಾಂಶ ಹೊರ ಬಂದೇ ಬರುತ್ತೆ ಕಾಯೋಣ – ಸತೀಶ್ ಜಾರಕಿಹೊಳಿ..!
ಇದೇ ವೇಳೆ ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ರಾಜ್ಯದ ಗೌರವ ಉಳಿಸಲು ನಿಷ್ಪಕ್ಷಪಾತ ತನಿಕೆ ಮಾಡಬೇಕು. ಯಾವುದೇ ತನಿಖೆ ಸರ್ಕಾರದಿಂದ ನಡೆದಾಗ ತಾರ್ಕಿಕ ಅಂತ್ಯ ಕಾಣಲ್ಲ. ಇಡೀ ದೇಶದ ವ್ಯವಸ್ಥೆ ಅದೇ ರೀತಿ ಇದೆ. ಯಾರನ್ನಾದರೂ ರಾಜಕೀಯವಾಗಿ ಮುಗಿಸುವಾಗ ಸಣ್ಣಪುಟ್ಟ ತಪ್ಪು ಮುಂದಿಟ್ಟುಕೊಂಡು ಅಧಿಕಾರದವರು ತಾತ್ಕಾಲಿಕವಾಗಿ ಬೆಳವಣಿಗೆ ಕುಂಟಿತ ಮಾಡುತ್ತಾರೆ. ಇಲ್ಲಿ ಹೆಣ್ಣು ಮಗಳುಗೆ ನ್ಯಾಯ ಸಿಗುತ್ತದೆಯೋ, ಇಲ್ಲ ಸಂತ್ರಸ್ತರಿಗೆ ನ್ಯಾಯ ಸಿಗುತ್ತೊ ಗೊತ್ತಿಲ್ಲ. ಇಲ್ಲಿ ಯಾರನ್ನು ನಾನು ಸಂತ್ರಸ್ತರು ಎನ್ನೋದು ಗೊತ್ತು ಇಲ್ಲಾ ಎಂದಿದ್ದಾರೆ.