ಭಾರತದಲ್ಲಿರುವ ಮುಸ್ಲಿಂರು ಮೂತಃ ಹಿಂದುಗಳೇ : ಚೈತ್ರಾ ಕುಂದಾಪುರ
ಬೆಳಗಾವಿ : ಭಾರತದಲ್ಲಿರುವ ಮುಸ್ಲಿಂರು ಅರಬ್ ರಾಷ್ಟ್ರದಿಂದ ಬಂದವರಲ್ಲ, ಇಲ್ಲಿರುವ ಮುಸ್ಲಿಂರು ಮೂತಃ ಹಿಂದುಗಳೇ ಆಗಿದ್ದಾರೆ ಎಂದು ಹಿಂದೂ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹೇಳಿದ್ದಾರೆ.
ಸೋಮವಾರ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತದಲ್ಲಿರುವ ಮುಸ್ಲಿಂರ ಡಿಎನ್ ಎ ಪರೀಕ್ಷೆ ಮಾಡಿದರೆ ಅವರು ಹಿಂದೂಗಳೆಂದು ಗೊತ್ತಾಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಸರಕಾರ ಯಾವುದೇ ಇರಲಿ ಅದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಯಾವುದೇ ಸರಕಾರಲಿ, ನಾವು ಹಿಂದೂ ಸಂಘಟನೆಗಳು ಹಿಂದೂ ಪರವಾಗಿಯೇ ಹೋರಾಟ ಮಾಡಿದ್ದೇವೆ. ಸರ್ಕಾರ ಆಗಲಿ, ರಾಜಕೀಯ ನಾಯಕರಾಗಲಿ ನಮಗೆ ಮುಖ್ಯವಲ್ಲ. ನಮಗೆ ಹಿಂದೂ ರಾಷ್ಟ್ರ ಮುಖ್ಯವಾಗಿದೆ ಎಂದು ತಿಳಿಸಿದರು.
ಇನ್ನೂ ಶಸ್ತ್ರ ಯಾವಾಗ ಬಳಸಬೇಕು, ಬಳಸಬಾರದು ಎಂದು ಹಿಂದೂ ಧರ್ಮ ಹೇಳಿಕೊಟ್ಟಿದೆ. . ಆತ್ಮ ರಕ್ಷಣೆಗಾಗಿ ಹಾಗೂ ಗೋವು ಕಳ್ಳತನ ತಡೆಯಲು ನಾವು ಶಸ್ತ್ರ ಬಳಸುತ್ತೇವೆ. ಯಾವುದೇ ಪ್ರಾಣ ರಕ್ಷಣೆಗಾಗಿ ಶಸ್ತ್ರ ಬಳಕೆ ಅಪರಾಧ ಅಲ್ಲವೆಂದು ಚೈತ್ರಾ ಕುಂದಾಪುರ ಕಿಡಿಕಾರಿದರು.
ಬಿಜೆಪಿ ಸರ್ಕಾರ ಇರಲಿ, ಕಾಂಗ್ರೆಸ್ ಸರ್ಕಾರ ಅಥವಾ ಜೆಡಿಎಸ್ ಸರ್ಕಾರ ಸೇರಿದಂತೆ ಯಾವುದೇ ಸರ್ಕಾರ ಇದ್ದರೂ ಹಿಂದೂ ಸಂಘಟನೆಗಳು ಹಿಂದೂ ಪರವಾಗಿಯೇ ಹೋರಾಟ ಮಾಡಿದ್ದೇವೆ. ವೆಂದು ತಿಳಿಸಿದರು. ಶಸ್ತ್ರ ಯಾವಾಗ ಬಳಸಬೇಕು, ಶಾಸ್ತ್ರ ಯಾವಾಗ ಬಳಸಬೇಕು ಎಂದು ಹಿಂದೂ ಧರ್ಮ ಹೇಳಿಕೊಟ್ಟಿದೆ ಚೈತ್ರಾ ಅಭಿಪ್ರಾಯಪಟ್ಟರು.