ಚಾಮರಾಜನಗರ chamarajanagara | ಜಮೀನು ವಿವಾದ ದಾಯಾದಿಗಳ ಮಾರಾಮಾರಿ
ಚಾಮರಾಜನಗರ : ಜಮೀನು ವಿವಾದ ಹಿನ್ನೆಲೆ ದಾಯಾದಿಗಳ ನಡುವೆ ಮಾರಾಮಾರಿ ನಡೆದ ಘಟನೆ ಚಾಮರಾಜನಗರ ಜಿಲ್ಲೆಯ ಸತ್ತೇಗಾಲ ಸಮೀಪದ ಪುಟ್ಟ ಶೆಟ್ಟಿದೊಡ್ಡಿಯಲ್ಲಿ ನಡೆದಿದೆ.
ಪುಟ್ಟಶೆಟ್ಟಿ ದೊಡ್ಡಿ ಗ್ರಾಮದ ಚಂದ್ರಶೇಖರ್ ಹಾಗೂ ಅವರ ಕುಟುಂಬದವರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ.
ಹಲ್ಲೆಗೊಳಗಾದ ಚಂದ್ರಶೇಖರ್ ರವರನ್ನು ಕೊಳ್ಳೇಗಾಲದ ಉಪ ವಿಭಾಗ ಸಕಾ9ರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಂದ್ರಶೇಖರ್ ಗೆ ಸೇರಿದ ಖಾಲಿ ಜಮೀನನ್ನು ಅಕ್ರಮವಾಗಿ ಉಳುಮೆ ಮಾಡಲು ಕೃಷ್ಣ ಎಂಬೋರು ಮುಂದಾಗಿದ್ದಾರೆ.
ಇದನ್ನು ಕೇಳಲು ಹೋದ ಚಂದ್ರಶೇಖರ್ ಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಕೃಷ್ಣ, ಭಾಗ್ಯಮ್ಮ, ಸೋಮಶೇಖರ್ ಹಾಗೂ ಭೂಮಿಕಾ ಎಂಬುವವರಿಂದ ಹಲ್ಲೆ ನಡೆದಿದೆ.
ಈ ಸಂಬಂಧವಾಗಿ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.