ಸಿಡಿ ಹಿಂದೆ ಚನ್ನಪಟ್ಟಣದವರ ಕೈವಾಡ : ಡಿ.ಕೆ.ಸುರೇಶ್ DK Suresh
ರಾಮನಗರ : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಎಸ್ ಐಟಿ ತನಿಖೆಗೆ ನೀಡಿರುವ ಬಗ್ಗೆ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡಿದ್ದು, ಇದೊಂದು ಕಣ್ಣು ಹೊರೆಸುವ ತಂತ್ರ ಅಷ್ಟೆ ಎಂದಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಗೃಹ ಸಚಿವರ ಹೇಳಿಕೆ ನೋಡಿದ್ದೇನೆ.
ಇದು ಸಿಡಿ ವಿಚಾರವನ್ನ ಮುಚ್ಚಿ ಹಾಕುವ ಪ್ರಯತ್ನ ಅಷ್ಟೆ. ಎಲ್ಲಾ ರೀತಿಯಲ್ಲಿ ತನಿಖೆ ಆಗಬೇಕಾದ್ರೆ ಎಪ್.ಐ.ಆರ್ ಆಗಬೇಕು.
ಕೇವಲ ಕಣ್ಣು ಹೊರೆಸುವ ತಂತ್ರದ ಭಾಗವಾಗಿ ಕ್ಲಿನ್ ಚೀಟ್ ಕೊಡುವ ಸಮಿತಿ ಅಷ್ಟೆ ಎಂದು ಹೇಳಿದರು.
ಇನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ ಇನ್ನೂ ಸಿಡಿಗಳಿವೆ ಅಂತಾ. ಇದರಲ್ಲಿ ಚನ್ನಪಟ್ಟಣದವರ ಕೈವಾಡ ಕೂಡ ಇರಬಹುದು.
ಚನ್ನಪಟ್ಟಣದವರಿಗೂ ಅಧಿಕಾರಿದ ಮೇಲೆ ಆಸೆ ಇತ್ತಲ್ವಾ..? ಅವರೆ ತಾನೆ ಅವರ ಜೊತೆಯಲ್ಲಿ ಇದ್ದವರು.
ನಾವು ಅವರ ಜೊತೆಯಲ್ಲಿ ಇದ್ವಾ, ಅವರೇ ತಾನೆ ಜೊತೆಯಲ್ಲಿ ಇದಿದ್ದು ಎಂದು ಸಿ.ಪಿ.ಯೋಗೀಶ್ವರ್ ಹೆಸರೇಳದೆ ಡಿ.ಕೆ.ಸುರೇಶ್ ಟಾಂಗ್ ನೀಡಿದರು.