ಬೆಳಗಾವಿ : ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗುವನ್ನು ಬದುಕಿಸಿಕೊಡುವಂತೆ ತಾಯಿ ಜೀಸಸ್ ಮೊರೆ ಹೋದ ಘಟನೆ ಬೆಳಗಾವಿಯಲ್ಲಿ ನಡೆದಿದೆ..
ಶಿಲುಬೆಯ ಮುಂದೆ ಪ್ರಜ್ಞಾಹೀನ ಮಗುವನ್ನು ಮಲಗಿಸಿ ಬದುಕಿಸುವಂತೆ ಅಂಗಲಾಚಿ ಕಣ್ಣೀರಿಟ್ಟಿದ್ದಾರೆ..
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಂದಗಡ ಹೊರ ವಲಯದಲ್ಲಿರುವ ಜಿಸಸ್ ದೇಗುಲದ ಬಳಿ ಈ ಘಟನೆ ನಡೆದಿದೆ.
ಜೋಯಿಡಾ ತಾಲೂಕಿನ ಅಂಬರಡಾ ಗ್ರಾಮದ ಎಂಟು ವರ್ಷದ ಬಾಲಕ ಶೈಲೆಶ್ ಕೋಮಾ ತಲುಪಿದ್ದಾನೆ..
ಮೆದುಳು ಜ್ವರದಿಂದ ಕೋಮಾಗೆ ಜಾರಿರುವ ಬಾಲಕ ಶೈಲೆಶ್ ರಕ್ಷಣೆಗಾಗಿ ತಾಯಿ ಗೋಳಾಟ..
ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ವೈದ್ಯರು ಮಗು ಬದುಕುಳಿಯುವದಿಲ್ಲ ಎಂದ ಮೇಲೆ ಮಗನನ್ನ ನಂದಗಡಗೆ ಚರ್ಚ್ ಗೆ ಕರೆ ತಂದಿದ್ದಾರೆ..