ಚರ್ಚುಗಳಲ್ಲಿ ಕೋವಿಡ್ ಲಸಿಕೆ ಪಡೆಯದಂತೆ ಜನರ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ – ಶೋಭಾ ಕರಂದ್ಲಾಜೆ
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಮಲೆನಾಡಿನ ಮೂಡಿಗರೆ ಮತ್ತು ಅಲ್ದೂರು ಚರ್ಚುಗಳಲ್ಲಿ ಕೋವಿಡ್ ಲಸಿಕೆಗಳನ್ನು ಪಡೆಯದಂತೆ ಜನರಿಗೆ ತಪ್ಪು ಸಲಹೆ ನೀಡುತ್ತಿರುವ ಬಗ್ಗೆ ವರದಿಯಾಗಿರುವುದಾಗಿ ತಿಳಿಸಿದ್ದಾರೆ. ಮೇ 19 ರ ಬುಧವಾರ ಚಿಕ್ಕಮಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಜನರು ಚರ್ಚ್ಗೆ ಭೇಟಿ ನೀಡಿದಾಗ ಅವರ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಯಾರು ಅವರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ತನಿಖೆ ಮಾಡಬೇಕು. ಕ್ಯಾಥೊಲಿಕರು ಇದನ್ನು ಮಾಡಿದ್ದಾರೆಂದು ನಾನು ಹೇಳುತ್ತಿಲ್ಲ. ಆದರೆ ಪೆಂಟೆಕೋಸ್ಟ್ ನಂತಹ ಕ್ರಿಶ್ಚಿಯನ್ ಧರ್ಮದ ಇತರ ಪಂಗಡಗಳು,ಇತ್ತೀಚೆಗೆ ಬಂದ ಚರ್ಚುಗಳು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಅವರ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ಟೂಲ್ಕಿಟ್ ವಿಷಯದ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಟೂಲ್ಕಿಟ್ ದೇಶಕ್ಕೆ ಮಾಡಿದ ಅವಮಾನ. ‘ಇಂಡಿಯಾ ವೈರಸ್’ ಮತ್ತು ‘ಮೋದಿ ವೈರಸ್’ ಎಂದು ಹೇಳಿ ದೇಶಕ್ಕೆ ಕಾಂಗ್ರೆಸ್ ಅವಮಾನ ಮಾಡಿದೆ. ವಿಶ್ವದ ಮುಂದೆ ದೇಶವನ್ನು ಕೆಣಕುವ ತಂತ್ರವನ್ನು ಕಾಂಗ್ರೆಸ್ ರೂಪಿಸುತ್ತಿದೆ. ಇದು ಕಾಂಗ್ರೆಸ್ಸಿನ ಮತ ಬ್ಯಾಂಕ್ ರಾಜಕೀಯ. ಚುನಾವಣೆಯ ಸಮಯದಲ್ಲಿ ನಾವು ರಾಜಕೀಯ ಮಾಡೋಣ. ಆದರೆ ಇದು ರಾಜಕೀಯ ಮಾಡುವ ಪರಿಸ್ಥಿತಿ ಅಲ್ಲ. ಚೀನಾ ನಮ್ಮ ದೇಶದ ಶತ್ರು. ಆದರೆ ಕಾಂಗ್ರೆಸ್, ಚೀನಾಕ್ಕಿಂತ ನಮ್ಮ ವಿರುದ್ಧ ಹೆಚ್ಚು ಮಾತನಾಡುತ್ತಿದೆ. ಕೋವಿಡ್ ಅನ್ನು ‘ಮೋದಿ ವೈರಸ್’ ಮತ್ತು ‘ಇಂಡಿಯಾ ವೈರಸ್’ ಎಂದು ಕರೆದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯ ನಮ್ಮ ಕೈಯಲ್ಲಿದೆ. ಇದು ಸಾಕ್ಷಾಟಿವಿ ಕಳಕಳಿ.
ಕೊರೋನಾ ಸಮಯದಲ್ಲಿ ಬೆಳ್ಳುಳ್ಳಿ ರಸ ಕುಡಿಯುವುದರಿಂದ ಸಿಗುವ ಪ್ರಯೋಜನಗಳು#Saakshatv #healthtips #garlicjuice https://t.co/Yoi4u1aizs
— Saaksha TV (@SaakshaTv) May 17, 2021
ನಾಲಿಗೆಯಲ್ಲಿ ತುರಿಕೆ ಮತ್ತು ಒಣಗುವಿಕೆ? ಇದು ಕೂಡ ಹೊಸ ಕೋವಿಡ್ -19 ರೋಗಲಕ್ಷಣವೆಂದಿದ್ದಾರೆ ಬೆಂಗಳೂರು ವೈದ್ಯರು !#NewCovid19 https://t.co/rF6LZLF5UV
— Saaksha TV (@SaakshaTv) May 17, 2021
ಗಮನಿಸಿ : ಮೇ 23 ರಂದು NEFT ಸೇವೆ ಕೆಲವು ಗಂಟೆಗಳ ಕಾಲ ಕಾರ್ಯನಿರ್ವಹಿಸುವುದಿಲ್ಲ !#RBIalert #NEFTservice https://t.co/hZrxOURZat
— Saaksha TV (@SaakshaTv) May 18, 2021
ಆರೋಗ್ಯಕರ ದೊಡ್ಡಪತ್ರೆ ಬಜ್ಜಿ#Saakshatv #cookingrecipe #doddapatrebajji https://t.co/mb4nPfEZGe
— Saaksha TV (@SaakshaTv) May 17, 2021
#Churches #Covidvaccine #ShobhaKarandlaje