ವಾಟ್ಸಾಪ್ ನಲ್ಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಗೆ ಅಶ್ಲೀಲ ಸಂದೇಶ : ‘ಕೈ’ ನಾಯಕನ ಬಂಧನ..!
ಉತ್ತರಾಖಂಡ್ : ಮಹಿಳಾ ಬ್ಯಾಂಕ್ ಮ್ಯಾನೇಜರ್ ಗೆ ವಾಟ್ಸಾಪ್ ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಕಾಂಗ್ರೆಸ್ ನಾಯಕನನ್ನ ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್ ಮುಖಂಡ ಅಜಾದ್ ಅಲಿಯನ್ನ ಬಂಧಿಸಲಾಗಿದೆ. ಆರೋಪ ಕೇಳಿಬಂದ ಬೆನ್ನಲ್ಲೇ ಪಕ್ಷದಿಂದಲೂ ಅಮಾನತು ಮಾಡಲಾಗಿದೆ. ಉತ್ತರಾಖಂಡ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಜಯ್ ಸರಸ್ವತ್ ಅವರು ಈ ಬಗ್ಗೆ ಮಾತನಾಡಿದ್ದು, ಪಕ್ಷದಿಂದ ಅಮಾನತು ಮಾಡಿರೋದಾಗಿ ತಿಳಿಸಿದ್ದಾರೆ.
ವಿಮಾ ಪಾಲಿಸಿಯೊಂದನ್ನು ಖರೀದಿಸುವ ವಿಚಾರವಾಗಿ ಬ್ಯಾಂಕ್ ಮ್ಯಾನೇಜರ್ ಅವರ ಜೊತೆಗೆ ಸಂಪರ್ಕ ಬೆಳೆಸಿದ್ದ ಕಾಂಗ್ರೆಸ್ ನಾಯಕ ಅಲಿ ವಾಟ್ಸಾಪ್ ನಲ್ಲಿ ಸಂಭಾಷಣೆ ವೇಳೆ ಅಶ್ಲೀಲ ಸಂದೇಶವೊಂದನ್ನು ಕಳುಹಿಸಿದ್ದಾರೆ. ಈ ಬಗ್ಗೆ ಮ್ಯಾನೇಜರ್ ದೂರು ದಾಖಲಿಸಿದ ಬಳಿಕ ಆತನನ್ನ ಅರೆಸ್ಟ್ ಮಾಡಿರೋದಾಗಿ ಕೊಟ್ವಾಲಿ ಠಾಣೆಯ ಹಿರಿಯ ಸಬ್ ಇನ್ಸ್ ಪೆಕ್ಟರ್ ಲೊಕೇಂದ್ರ ಬಹುಗುಣ ತಿಳಿಸಿದ್ದಾರೆ.
ಬಾಂಗ್ಲಾ ಪ್ರಧಾನಿ ಹತ್ಯೆಗೆ ಯತ್ನಿಸಿದ 14 ಉಗ್ರರಿಗೆ ಗಲ್ಲು ಶಿಕ್ಷೆ..!
UPSC ಮೈನ್ ಫಲಿತಾಂಶ ಪ್ರಕಟ… ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ..!