ಕೆಜಿಎಫ್ ಬಾಬುಗೆ ಕೈ ಟಿಕೆಟ್ : ವಿನಾಶ ಕಾಲೇ ವಿಪರೀತ ಬುದ್ಧಿ ಎಂದ ಬಿಜೆಪಿ
ಬೆಂಗಳೂರು : ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆಜಿಎಫ್ ಬಾಬು ಬೆಂಗಳೂರು ನಗರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ.
ಈ ಬಗ್ಗೆ ರಾಜ್ಯ ಬಿಜೆಪಿ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದು, ವಿನಾಶ ಕಾಲೇ ವಿಪರೀತ ಬುದ್ಧಿ ಎಂದು ಡಿಕೆಶಿವಕುಮಾರ್ ಗೆ ಟಾಂಗ್ ನೀಡಿದೆ.
ಬಿಜೆಪಿ ಟ್ವೀಟ್ ನಲ್ಲಿ..
ಎಂಥ ಘನ ಹಿನ್ನೆಲೆಯ ವ್ಯಕ್ತಿಗೆ ಕಾಂಗ್ರೆಸ್ ವಿಧಾನ ಪರಿಷತ್ ಚುನಾವಣಾ ಟಿಕೆಟ್ ಲಭಿಸಿದೆ!!! ಅಸಭ್ಯ ವರ್ತನೆಗಾಗಿ ಸಿಸಿಬಿ ಕಚೇರಿಯಲ್ಲಿ ಕಂಬಿ ಎಣಿಸಿದ ವ್ಯಕ್ತಿಯನ್ನು ಹಿರಿಯರ ಸದನದ ಸದಸ್ಯನಾಗಿಸುವುದಕ್ಕೆ #ಭ್ರಷ್ಟಾಧ್ಯಕ್ಷ ಡಿಕೆಶಿ ಮುಂದಾಗಿದ್ದಾರೆ. ಕೈ ಅಭ್ಯರ್ಥಿಯ ರೌಡಿ ಹಿನ್ನೆಲೆ ಡಿಕೆಶಿ ಅವರನ್ನು ಆಕರ್ಷಿಸಿರಬಹುದೇ!?
ಕೊತ್ವಾಲ್ ರಾಮಚಂದ್ರನ ಶಿಷ್ಯನೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿರುವಾಗ ರೌಡಿಶೀಟರ್ಗಳು ಸಭ್ಯರಂತೆ ಕಾಣುವುದರಲ್ಲಿ ವಿಶೇಷತೆ ಏನಿಲ್ಲ. ಡಿಕೆಶಿಯವರೇ, ಯಾವ ಅರ್ಹತೆಯ ಆಧಾರದಲ್ಲಿ ಈ ವ್ಯಕ್ತಿಯನ್ನು ಹಿರಿಯರ ಮನೆಗೆ ಕಳುಹಿಸಲು ಉತ್ಸಾಹ ತೋರುತ್ತಿದ್ದೀರಿ? ವಿನಾಶ ಕಾಲೇ ವಿಪರೀತ ಬುದ್ಧಿ ಎನ್ನುವುದಿದಕ್ಕೆ ಎಂದು ಕುಟುಕಿದೆ.