ಕೆಪಿಸಿಸಿ ಕಚೇರಿ ಬಳಿ ಪ್ರತಿಭಟನಾನಿರತರನ್ನು ವಶಪಡಿಸಿಕೊಂಡ ಪೊಲೀಸರು
ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕ್ರಮಗಳನ್ನ ಕೈಗೊಂಡಿದೆ.. ಅಲ್ಲದೇ ಲಾಕ್ ಡೌನ್ ಕೂಡ ಜಾರಿಗಿಳಿಸಿ ಇದೀಗ ಕ್ರಮೇಣ ಸಡಿಲಿಕೆಗೊಳಿಸಿದೆ.. ಈ ನಡುವೆ ಬಹುತೇಕ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿದೆ.. ಆದ್ರೆ ಸಿನಿಮಾಮಂದಿರಗಳು , ಪಬ್ ಗಳು ಮುಖ್ಯವಾಗಿ , ಸಾರ್ವಜನಿಕ ಸಭೆ ಸಮಾರಂಭಗಳು , ಪ್ರತಿಭಟನೆಗಳು , ಜಾಥಾಗಳಿಗೆ ಅನುಮತಿ ನೀಡಿಲ್ಲ..
ಹೀಗಿರೋವಾಗ ಕೆಪಿಸಿಸಿ ಕಚೇರಿ ಬಳಿ ಪ್ರತಿಭಟನಾ ಜಾಥಾ ನಡೆಸುತ್ತಿದ್ದ ಪ್ರತಿಭಟನಾನಿರತರನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೆಪಿಸಿಸಿ ಕಚೇರಿ ಬಳಿಯೇ ಪ್ರತಿಭಟನಾಕಾರರನ್ನ ವಶಕ್ಕೆ ಪಡೆದು ಅವರನ್ನ ಬಿಎಂಟಿಸಿ ಬಸ್ ನಲ್ಲಿ ಪ್ರತಿಭಟನಾಕಾರರನ್ನು ತುಂಬಿ ಕರೆದೊಯ್ದಿದ್ದಾರೆ.. ಕೋವಿಡ್ ನಿಯಮ ಉಲ್ಲಂಘನೆ ಹಿನ್ನೆಲೆ ಪ್ರತಿಭಟನೆ ತಡೆದಿದದಾರೆ. ಪ್ರತಿಭಟನಾ ನಿರತರು ಸೈಕಲ್ ಜಾತಾ ಮೂಲಕ ಬಿಬಿಎಂಪಿ ಗೆ ತೆರಳುತ್ತಿದ್ದ ವೇಳೆ ಪೊಲೀಸರು ಅವರನ್ನ ತಡೆದಿದ್ದಾರೆ.