Congress | ಡೀಲ್ ರಾಜಕೀಯ ಬಿಜೆಪಿಯವರ ಮನೆದೇವರಾಗಿಬಿಟ್ಟಿದೆ
ಬೆಂಗಳೂರು : ಡೀಲ್ ರಾಜಕೀಯ ಬಿಜೆಪಿಯವರ ಮನೆದೇವರಾಗಿಬಿಟ್ಟಿದೆ ಎಂದು ರಾಜ್ಯ ಕಾಂಗ್ರೆಸ್ ಕುಟುಕಿದೆ. ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮರ ಮುಂದುವರೆದಿದೆ.
ಬಿಜೆಪಿ ಟ್ವೀಟ್ ನಲ್ಲಿ.. ರೈತ ಹೋರಾಟದ ಹೆಸರಿನಲ್ಲಿ ಕೆಲವರು ಕೋಟಿಗಟ್ಟಲೆ ಡೀಲ್ ಮಾಡಿಕೊಳ್ಳುತ್ತಿದ್ದಾರೆ. ಈ ಡೀಲ್ ರಾಜರ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಅನುಕಂಪ ತೋರಿಸುತ್ತಾರೆ.
ಡೀಲ್ ಮೂಲಕ ಸಂಗ್ರಹವಾದ ಅಕ್ರಮ ಹಣ ಎಲ್ಲಿ ತಲುಪುತ್ತಿದೆ, ಕೆಪಿಸಿಸಿ ಕಚೇರಿಯನ್ನೋ..? ಅಥವಾ ಸದಾಶಿವ ನಗರದ ಬಂಗಲೆಯನ್ನೋ.. ಎಂದು ಪ್ರಶ್ನೆ ಮಾಡಿದೆ.
ಇದಕ್ಕೆ ಕಾಂಗ್ರೆಸ್ ಟ್ವೀಟ್ ನಲ್ಲಿ ಕುಟುಕಿದ್ದು, ಡೀಲ್ ರಾಜಕೀಯ ಬಿಜೆಪಿಯವರ ಮನೆದೇವರಾಗಿಬಿಟ್ಟಿದೆ. ಎಲ್ಲದರಲ್ಲೂ 40% ಡೀಲ್ ನಡೆಸಿ ಅಮಾಯಕರನ್ನು ಬಲಿ ಪಡೆಯುತ್ತಿದ್ದಾರೆ.
ಅಂದ ಹಾಗೆ ಈಶ್ವರಪ್ಪನ ಮೇಲಿನ ತನಿಖೆ ಎಲ್ಲಿಗೆ ತಲುಪಿತು 40% ಡೀಲ್ ಸರ್ಕಾರದವರೇ? ನೂರಾರು ಕೋಟಿ ಕೊಳ್ಳೆ ಹೊಡೆದ 40% ಡೀಲ್ ಹಣ ಬಿಜೆಪಿ ಕಛೇರಿ ತಲುಪುತ್ತಿದ್ಯೋ ಅಥವಾ ನಾಗಪುರದ ಹುತ್ತ ಸೇರುತ್ತಿದ್ಯೋ ಎಂದು ವ್ಯಂಗ್ಯವಾಡಿದೆ.
congress-slams bjp in twitter