ಮೈಸೂರು: ಮೈಸೂರಿನಲ್ಲಿ ಮಹಾಮಾರಿ ಕೊರೊನಾ ವೈರಸ್ ಸಮುದಾಯದ ಹಂತಕ್ಕೆ ಇನ್ನೂ ಹರಡಿಲ್ಲ. ಪೆÇಲೀಸರಿಗೆ ಮಾತ್ರ ಒಟ್ಟಿಗೆ ಬಂದಿದೆ. ಹೀಗಾಗಿ ಕೋವಿಡ್ ಟೆಸ್ಟ್ ಹೆಚ್ಚಳಕ್ಕೆ ಚಿಂತನೆ ನಡೆದಿದ್ದು, ಸಿಬ್ಬಂದಿ ಕೊರತೆ ನೀಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಭರವಸೆ ನೀಡಿದ್ದಾರೆ.
ಕೋರೋನಾ ತಡೆಗಟ್ಟುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಹಿತಿ ನೀಡಿದ ಸಚಿವ ಸೋಮಶೇಖರ್, ತಮಿಳುನಾಡು ರಾಜಸ್ಥಾನ, ಆಂಧ್ರದಿಂದ ಬಂದವರಲ್ಲಿ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದೆ.
ಹೆಚ್ಚಿನ ರೋಗಿಗಳನ್ನ ಜೆಎಸ್ಎಸ್ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದರು.
ಮಾಸ್ಕ್ ಇಲ್ಲದೆ ತಿರುಗಾಡಿದರೇ ಹುಷಾರ್..!
ಮೈಸೂರಿನಲ್ಲಿ ಮಾಸ್ಕ್ ಇಲ್ಲದೆ ತಿರುಗಾಡಿದರೇ 200 ರೂಪಾಯಿ ದಂಡ, ಗುಂಪುಗೂಡಿದರು ಕೂಡ ದಂಡ ವಿಧಿಸಲಾಗುವುದು ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
ಮುಂದಿನ ಶುಕ್ರವಾರದಿಂದ ಸಂಜೆ ಆರು ಗಂಟೆಯಿಂದ ಎಲ್ಲ ರೀತಿಯ ವಹಿವಾಟು ಬಂದ್ ಮಾಡಲಾಗುವುದು. ಎಪಿಎಂಸಿಯ ಎಲ್ಲ ರೀತಿಯ ವಹಿವಾಟುದಾರರಿಗೆ ಸ್ಕ್ರೀನಿಂಗ್ ಕಡ್ಡಾಯ ಮಾಡಲಾಗಿದೆ. ಪೆÇಲೀಸ್ ಇಲಾಖೆಯಲ್ಲಿ 55 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯ ಕೊವಿಡ್ ಟೆಸ್ಟ್ ಮಾಡಿಸಲಾಗುದು ಎಂದು ಸಚಿವರು ತಿಳಿಸಿದ್ದಾರೆ.