ಕೊರೊನಾ ಹೆಚ್ಚಳ : ನೈಟ್ ಕರ್ಫ್ಯೂ ಬಗ್ಗೆ ಹೆಲ್ತ್ ಮಿನಿಸ್ಟರ್ ಹೇಳಿದ್ದೇನು..?
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಆರೋಗ್ಯ ಮಂತ್ರಿ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಕೊರೊನಾ ಲಸಿಕೆ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಲ್ಲಿ ಕೊರೋನಾ ಜಾಸ್ತಿ ಯಾಗಿರೋದನ್ನು ನಾನು ಒಪ್ಪಿಕೊಳ್ತೇನೆ.
ಕೊರೊನಾ ತಡೆಗೆ ಶೀಘ್ರವೇ ಸಿಎಂ ವೀಡಿಯೋ ಕಾನ್ಪೆರೆನ್ಸ್ ನಡೆಸಲಿದ್ದಾರೆ. ಎಲ್ಲಾ ಜಿಲ್ಲೆಗಳ ಡಿಸಿಗಳ ಜೊತೆ ವೀಡಿಯೋ ಕಾನ್ಪೆರೆನ್ಸ್ ನಡೆಸಲಿದ್ದಾರೆ.
ಅಗತ್ಯ ಕ್ರಮ ವಹಿಸೋ ಬಗ್ಗೆ ಸೂಚನೆ ಕೊಡಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ನೈರ್ಟ್ ಕಫ್ರ್ಯೂ ಬಗ್ಗೆ ಮಾತನಾಡಿ, ಈ ಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ರು. ಕೊರೊನಾ ತಡೆಗೆ ರಾಜ್ಯದಲ್ಲಿ ಬಿಗಿ ಕ್ರಮ ಅವಶ್ಯವಾಗಿದೆ.
ಹೀಗಾಗಿ ಸಿಎಂ ವಿಡಿಯೋ ಕಾನ್ಪೆರೆನ್ಸ್ ಮೂಲಕ ಡಿಸಿಗಳಿಗೆ ಅಗತ್ಯ ಸೂಚನೆ ಕೊಡಲಿದ್ದಾರೆ. ಪ್ರತೀದಿನ 300, 400 ಸೋಂಕು ಏರಿಕೆಯಾಗ್ತಿದೆ
ಮಹಾರಾಷ್ಟ್ರ ಸೇರಿದಂತೆ ನೆರೆಯ ರಾಜ್ಯಗಳಿಗೆ ಹೋಲಿಸಿಕೊಂಡ್ರೆ ನಮ್ಮಲ್ಲಿ ಕಡಿಮೆ ಇದೆ. ಕಡ್ಡಾಯವಾಗಿ ಮಾಸ್ಕ್ ಬಳಸಿ, ಅಂತರ ಕಾಪಾಡಿ ಎಂದು ಮನವಿ ಮಾಡಿಕೊಂಡರು.