ಕೊರೊನಾ ಕಡಿಮೆ ಆದ್ರೆ ಲಾಕ್ ಡೌನ್ ಮುಂದುವರೆಯಲ್ಲ : ಸಿಎಂ
ಬೆಂಗಳೂರು : ಕೊರೊನಾ ಕಡಿಮೆ ಆದ್ರೆ ಲಾಕ್ ಡೌನ್ ಮುಂದುವರೆಯಲ್ಲ. ಜನ ಸಹಕರಿಸಿದರೆ ಲಾಕ್ ಡೌನ್ ಮುಂದುವರೆಸುವ ಪ್ರಶ್ನೆ ಉದ್ಬವಿಸಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣದಲ್ಲಿ ಐದು ಜಿಲ್ಲೆಗಳ ಜನಪ್ರತಿನಿಗಳ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಲಾಕ್ ಡೌನ್ ಈಗ ಏನಿದೆ, ಅಲ್ಲಿಯವರೆಗೂ ಇರುತ್ತದೆ.
ಅಲ್ಲಿವರೆಗೂ ಬಿಗಿಯಾದ ಕ್ರಮ ಮುಂದುವರೆಯಲಿದೆ. ಕೊರೊನಾ ಕೆಡಿಮೆ ಆದ್ರೆ ಲಾಕ್ ಡೌನ್ ಮುಂದುವರೆಯಲ್ಲ ಎಂದು ಮಾಹಿತಿ ನೀಡಿದರು.
ಇನ್ನು ಐದು ಜಿಲ್ಲೆಗಳ ಜನಪ್ರತಿನಿಧಿಗಳ ಜೊತೆ ಚರ್ಚೆ ಮಾಡಿದ್ದೇನೆ. ಮೂರು ಗಂಟೆ ಕಾಲ ಚರ್ಚೆ ನಡೆದಿದೆ.
ಕೋವಿಡ್ ಸ್ಥಿತಿಗತಿ ಬಗ್ಗೆ ಚರ್ಚೆ ಮಾಡಲಾಗಿದೆ. ಪ್ರತೀ ಗ್ರಾಮ ಪಂಚಾಯತ್ನಲ್ಲೂ ಕೋವಿಡ್ ನಿಯಂತ್ರಣಕ್ಕೆ ಸೂಚಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಹಣಕಾಸಿನ ಯಾವುದೇ ಸಮಸ್ಯೆ ಇಲ್ಲ. ಕೋವಿಡ್ ಕಡಿಮೆ ಮಾಡಲು ಸೂಚನೆ ನೀಡಿದ್ದೇನೆ ಎಂದರು.