ಬೇಕಾಬಿಟ್ಟಿ ರಸ್ತೆಗಿಳಿದ್ರೆ ಕ್ವಾರಂಟೈನ್ ಶಿಕ್ಷೆ chikkamagaluru
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದರೂ ಕೆಲವರು ಬೇಕಾಬಿಟ್ಟಿ ರಸ್ತೆಗಿಳಿಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ತರೀಕೆರೆ ಪುರಸಭೆ ಮತ್ತು ಪೊಲೀಸರು ಬೇಕಾಬಿಟ್ಟಿ ರಸ್ತೆಗಿಳಿಯುವವರನ್ನು ಹಿಡಿದು ಕ್ವಾರಂಟೈನ್ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಸದ್ಯ ಲಾಕ್ ಡೌನ್ ಜಾರಿಯಲ್ಲಿದೆ. ಆದರೂ ಜನರು ಸುಖಾಸುಮ್ಮನೆ ರಸ್ತೆಗಿಳಿಯುತ್ತಿದ್ದಾರೆ.
ಇದನ್ನು ನಿಯಂತ್ರಿಸಲು ತರೀಕೆರೆ ಪಟ್ಟಣದಲ್ಲಿ ಖಡಕ್ ರೂಲ್ಸ್ ಜಾರಿ ಮಾಡಿದ್ದು, ಸುಖಾಸುಮ್ಮನೆ ರಸ್ತೆಗೆ ಬರುವವರನ್ನು ಮತ್ತು ಹೆಚ್ಚು ಓಡಾಟ ಮಾಡಿದವರನ್ನು ಹಿಡಿದು ಕ್ವಾರಂಟೈನ್ ಕೇಂದ್ರಕ್ಕೆ ಸೇರಿಸುವ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ.
ಇದಕ್ಕಾಗಿ ಪಿಪಿಇ ಕಿಟ್ ಧರಿಸಿಕೊಂಡು ಜನರನ್ನು ಹಿಡಿಯಲು ಪುರಸಭೆ ಸಿಬ್ಬಂದಿ ಸಜ್ಜಾಗಿದ್ದಾರೆ.
ತರೀಕೆರೆ ಪುರಸಭೆ ಮತ್ತು ಪೊಲೀಸರಿಂದ ಜಂಟಿ ಕಾರ್ಯಾಚರಣೆ ಆರಂಭವಾಗಿದ್ದು, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.