ಜನರಿಗೊಂದು ಕಾನೂನು.. ರಾಜಕಾರಣಿಗಳಿಗೊಂದು ಕಾನೂನು..? Corona virus saaksha tv
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಜನರಿಗೊಂದು ಕಾನೂನು, ರಾಜಕಾರಣಿಗಳಿಗೊಂದು ಕಾನೂನು ಎಂಬಂತಾಗಿದೆ.
ಕೊರೊನಾ ಆತಂಕ, ನಿಯಮಗಳನ್ನು ಗಾಳಿಗೆ ತೂರಿ ಜನವರಿ 14 ರಂದು ಬಿಜೆಪಿ ನಾಯಕ ಎನ್ ಆರ್ ರಮೇಶ್ ಭರ್ಜರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.
ಚಾಮರಾಜಪೇಟೆಯ ರಾಯಪುರ ವಾರ್ಡ್ ನಲ್ಲಿ ನೂರಾರು ಜನರ ಜೊತೆ ಎನ್ ಆರ್ ರಮೇಶ್ ಮೆರವಣಿಗೆ ಮಾಡಲಾಗಿದೆ.
ಡೋಲು ತಮಟೆಗಳೊಂದಿಗೆ ಎನ್ ಆರ್ ರಮೇಶ್ ಗೆ ಸ್ವಾಗತ ಕೋರಲಾಗಿದೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವು ಇಲ್ಲದೆ ಜನರು ಗುಂಪುಗೂಡಿದ್ದರು.
ಮಾಜಿ ಕಾರ್ಪೋರೇಟರ್ ಆಗಿರುವ ಎನ್ ಆರ್ ರಮೇಶ್ ಅವರು ಕೋವಿಡ್ ನಿಯಮ ಉಲ್ಲಂಘನೆ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.