ಕುಡಿದ ಮತ್ತಿನಲ್ಲಿ ಮನೆಗೆ ಬೆಂಕಿಯಿಟ್ಟು 7 ಜನರನ್ನ ಕೊಂದಿದ್ದ ಆರೋಪಿ ಸಾವು..!
ಕೊಡಗು: ಕುಡಿದ ಮತ್ತಿನಲ್ಲಿ ಮನೆಯೊಂದಕ್ಕೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟು 7 ಜನರ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಇದೀಗ ಶವವಾಗಿ ಪತ್ತೆಯಾಗಿದ್ದಾನೆ. ಕುಡಿದ ಅಮಿಲಿನಲ್ಲಿ ಈತ ಮಾಡಿದ್ದ ಹೇಯ ಕೃತ್ಯದಿಂದ 7 ಮಂದಿ ಸಜೀವ ದಹನವಾಗಿದ್ದರು. ಬಳಿಕ ಈತ ಎಸ್ಕೇಪ್ ಆಗಿದ್ದ. ಪೊಲೀಸರು ಈತನ ಹುಡುಕಾಟಕ್ಕೆ ಬಲೆ ಬೀಸಿದ್ದರು. ಆದ್ರೆ ಇದೀಗ ಈತನ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೆ ಈ ಘಟನೆ ಕೊಡಗಿನಲ್ಲಿ ನಡೆದಿತ್ತು. ಆರೋಪಿ ಭೋಜನ ಮೃತದೇಹವು ಗ್ರಾಮದ ತೋಟವೊಂದ್ರಲ್ಲಿ ಪತ್ತೆಯಾಗಿದೆ. ಮಂಜ ಎಂಬುವವರ ಮನೆ ಬಾಗಿಲು ಲಾಕ್ ಮಾಡಿ ಬೆಂಕಿ ಹಚ್ಚಿದ್ದ. ಮನೆಯಲ್ಲಿದ್ದ ಕುಟುಂಬ ಸದಸ್ಯರು ಹೊರಬರಲಾಗದೇ ಸಜೀವ ದಹನವಾಗಿದ್ದರು. 4 ಮಕ್ಕಳು ಇಬ್ಬರು ಮಹಿಳೆಯರು ಸೇರಿ 7 ಜನರು ಧಾರುಣವಾಗಿ ಮೃತಪಟ್ಟಿದ್ದರು.