ಶಿವಮೊಗ್ಗ : ಆರೋಪಿಯನ್ನು ಬಂಧಿಸಲು ಹೋದ ಪೊಲೀಸ್ ಕ್ರೈಮ್ ಸಿಬ್ಬಂದಿಗೆ ಚಾಕು ಇರಿದಿರುವ ಘಟನೆ ಶಿವಮೊಗ್ಗದ ಶಿವಮೊಗ್ಗದ ಬೈಪಾಸ್ ರಸ್ತೆ ಸಮೀಪದ ಕ್ಲಾರ್ಕ್ ಪೇಟೆಯಲ್ಲಿ ನಡೆದಿದೆ.. ಪೊಲೀಸ್ ಪೇದೆ ಗುರುನಾಯಕ್ ಗೆ ಚಾಕು ಇರಿತವಾಗಿದೆ..
ಶಿವಮೊಗ್ಗದ ದೊಡ್ಡಪೇಟೆ ಠಾಣೆಯ ಕ್ರೈಮ್ ಸಿಬ್ಬಂದಿಯಾಗಿರುವ ಗುರು ನಾಯಕ್ ಗೆ ಚಾಕು ಇರಿಯಲಾಗಿದೆ.. ಶಾಹಿದ್ ಖುರೇಶಿ ಪೊಲೀಸರಿಗೆ ಚಾಕು ಇರಿದ ದುಷ್ಕರ್ಮಿಯಾಗಿದ್ದಾನೆ.
ಪ್ರಕರಣವೊಂದರಲ್ಲಿ ಶಾಹಿದ್ ನನ್ನು ಬಂಧಿಸಲು ಹೋಗಿದ್ದ ಗುರು ನಾಯಕ್ ಗೆ ಚಾಕು ಇರಿದಿದ್ದಾನೆ. ಈ ವೇಳೆ ಚಾಕುವಿನಿಂದ ಗುರುನಾಯ್ಕ್ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ.. ಗುರುನಾಯ್ಕ್ ಬಲಭಾಗದ ಎದೆಗೆ ಚಾಕು ಇರಿದಿದ್ದು ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.. ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..