ನೀರು ಕುಡಿಯುತ್ತಿದ್ದ ರೈತನ ಬಲಿ ಪಡೆದ ಮೊಸಳೆ yadagiri saaksha tv
ಯಾದಗಿರಿ : ನದಿಯಲ್ಲಿ ನೀರು ಕುಡಿಯುತ್ತಿದ್ದ ರೈತನ ಮೇಲೆ ಮೊಸಳೆ ಆಕ್ರಮಣ ನಡೆಸಿ ಬಲಿ ಪಡೆದುಕೊಂಡಿರುವ ಘಟನೆ ಯಾದಗಿರಿಯ ವಡಗೇರ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ನಡೆದಿದೆ.
ಕೊಂಕಲ್ ಗ್ರಾಮದ ರೈತ ವೆಂಕಟೇಶ್ ಮೊಸಳೆ ದಾಳಿಗೆ ತುತ್ತಾಗಿ ಮೃತಪಟ್ಟವರಾಗಿದ್ದಾರೆ.
ವೆಂಕಟೇಶ ನಿನ್ನೆ ಸಂಜೆ ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ನದಿಯಲ್ಲಿ ನೀರು ಕುಡಿಯಲು ಹೋಗಿದ್ದಾರೆ.
ಈ ವೇಳೆ ಮೊಸಳೆ ದಾಳಿ ನಡೆಸಿ ನೀರಿನ ಒಳಗೆ ಎಳೆದುಕೊಂಡು ಹೋಗಿದೆ.
ಇನ್ನು ನದಿಯ ಪಕ್ಕದಲ್ಲಿ ಚಪ್ಪಲಿ ಇದ್ದರಿಂದ ಮೊಸಳೆ ದಾಳಿ ನಡೆಸಿರಬಹುದು ಎಂದು ಸ್ಥಳೀಯರು ಶಂಕಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಕಾರ್ಯಪ್ರೌರುತ್ತರಾದ ಅಗ್ನಿ ಶಾಮಕದಳ ವೆಂಕಟೇಶ ಅವರಿಗಾಗಿ ಕಾರ್ಯಾಚರಣ ನಡೆಸಿದ್ದಾರೆ. ಇಂದು ಬೆಳಿಗ್ಗೆ ವೆಂಕಟೇಶ್ ಅವರು ಮೃತ ದೇಹ ಪತ್ತೆಯಾಗಿದೆ.