ದಲೈಲಾಮಾ ಉತ್ತರಾಧಿಕಾರಿತ್ವಕ್ಕೆ ಚಕಾರ ಎತ್ತಿದ ಚೀನಾ – ‘ಚೀನಾ ಸರ್ಕಾರದ ಅನುಮೋದನೆ ಅವಶ್ಯಕ’
ಟಿಬೆಟ್ ನ ಅಧ್ಯಾತ್ಮ ಗುರು ದಲೈಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ವಿಚಾರದಲ್ಲಿ ಚೀನಾ ಚಕಾರ ಎತ್ತಿದೆ.. ಅವರ ಉತ್ತರಾಧಿಕಾರಿ ಆಯ್ಕೆಗೆ ಚೀನಾದ ಅನುಮೋದನೆ ಬೇಕು ಎಂದು ತನ್ನ ನಿಲುವನ್ನ ಮುಂದಿಟ್ಟಿದೆ.
ದಲೈಲಾಮಾ ಮತ್ತು ಅವರ ಸಹಚರರು ಆರಿಸಿದ ಯಾವುದೇ ಉತ್ತರಾಧಿಕಾರಿಗೆ ಮಾನ್ಯತೆ ನೀಡಲಾಗುವುದಿಲ್ಲ ಎಂದು ಚೀನಾ ಹೇಳಿದೆ. ದಲೈಲಾಮ ಅವರ ಉತ್ತರಾಧಿಕಾರಿ ಆಯ್ಕೆಗೆ ಚೀನಾದ ಕೇಂದ್ರ ಸರ್ಕಾರದ ಅನುಮೋದನೆ ಬೇಕು. ಇದು ಕ್ವಿಂಗ್ ರಾಜವಂಶದ ಕಾಲದಿಂದ ನಡೆಯುತ್ತಾ ಬಂದಿದೆ ಎಂದು ಚೀನಾ ಸರ್ಕಾರ ಬಿಡುಗಡೆ ಅಧಿಕೃತವಾಗಿ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೇ ಪ್ರಾಚೀನ ಕಾಲದಿಂದಲೂ ಟಿಬೆಟ್ ಚೀನಾದ ಅವಿಭಾಜ್ಯ ಭಾಗ ಎಂದು ಹೇಳಿಕೊಂಡಿದೆ. 1793ರಲ್ಲಿ ಗೂರ್ಖಾ ಆಕ್ರಮಣಕಾರರನ್ನು ಟಿಬೆಟ್ ನಿಂದ ಹೊರ ಓಡಿಸಿದಾಗ ಕ್ವಿಂಗ್ ಸರ್ಕಾರವು ಟಿಬೆಟ್ ನ ಹೊರಡಿಸಿದ್ದ ಸುಗ್ರೀವಾಜ್ಞೆಯ ಅನುಸಾರ ಕೇಂದ್ರ ಸರ್ಕಾರವು ಟಿಬೆಟ್ ವ್ಯವಸ್ಥೆಯನ್ನು ನೋಡಿಕೊಳ್ಳಲಿದೆ. ಅದೇ ರೀತಿ ದಲೈಲಾಮ ಅವರ ಉತ್ತರಾಧಿಕಾರಿ ಆಯ್ಕೆಗೂ ಚೀನಾದ ಕೇಂದ್ರ ಸರ್ಕಾರ ಅನುಮೋದನೆ ಪಡೆಯಬೇಕಿದೆ ಎಂದಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ