ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ರನ್ನು (Darshan) ಕಾಟೇರ ನಿರ್ದೇಶಕ ತರುಣ್ ಸುಧೀರ್ (Tharun Sudhir) ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ (Darshan Puttannaiah) ಭೇಟಿಯಾಗಿದ್ದಾರೆ.
ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿರುವ ದರ್ಶನ್ರನ್ನು ನೋಡಲು ಒಬ್ಬೊಬ್ಬರೇ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡುತ್ತಿದ್ದಾರೆ. ಈಗ ಪ್ರತ್ಯೇಕ ಕಾರಿನಲ್ಲಿ ಜೈಲಿನ ಚೆಕ್ ಪೋಸ್ಟ್ ಒಳಗೆ ತರುಣ್ ಸುಧೀರ್ ಮತ್ತು ದರ್ಶನ್ ಪುಟ್ಟಣ್ಣಯ್ಯ ಬಂದಿದ್ದಾರೆ. ಜೈಲಿನ ಪ್ರತ್ಯೇಕ ಕೊಠಡಿಯಲ್ಲಿ ದರ್ಶನ್ ರನ್ನು ಭೇಟಿಯಾಗಿದ್ದಾರೆ.
ಸೋನಲ್ (Sonal) ಜೊತೆಗಿನ ಮದುವೆ ಸಂಗತಿ ಸತ್ಯ ಎಂದು ಒಪ್ಪಿಕೊಂಡ ನಂತರ ಕಾಟೇರ ನಿರ್ದೇಶಕ ತರುಣ್ ಅವರು ದರ್ಶನ್ ಭೇಟಿಗೆ ತೆರಳಿದ್ದಾರೆ. ಇತ್ತ ದರ್ಶನ್ ಪುಟ್ಟಣ್ಣಯ್ಯ ಕೂಡ ನಟನನ್ನು ಮಾತನಾಡಿಸಲು ಬಂದಿದ್ದಾರೆ.
ಜೈಲು ನಿಯಮದಂತೆ ಒಂದು ವಾರದಲ್ಲಿ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಇರುತ್ತದೆ. ಈ ವಾರ ಈಗಾಗಲೇ ದರ್ಶನ್ ಭೇಟಿಗೆ ಪತ್ನಿ, ತಾಯಿ ಹಾಗೂ ಸಹೋದರ ಬಂದಿದ್ದರು. ಈ ಮಧ್ಯೆ ತರುಣ್ ಹಾಗೂ ದರ್ಶನ್ ಪುಟ್ಟಣ್ಣಯ್ಯ ಬಂದಿದ್ದಾರೆ.