ಧ್ರುವ ಫ್ಯಾನ್ಸ್ ಗೆ 1 ಗುಡ್ ನ್ಯೂಸ್… ಮತ್ತೊಂದು ಸ್ಯಾಡ್ ನ್ಯೂಸ್..!
‘ದುಬಾರಿ’ ಕೈಬಿಟ್ಟ ಧ್ರುವ …! ಯಾಕೆ…? ಮುಂದೇನ್ ಕಥೆ..?
ದುಬಾರಿ ಬಿಟ್ಟು ಬೇರೆ ಸಿನಿಮಾ ಕೈಗೆತ್ತಿಕೊಂಡ ನಂದ ಕಿಶೋರ್..!
ಪೊಗರು ಸಿನಿಮಾ ರಿಲೀಸ್ ಗೂ ಮುನ್ನವೇ ನಂದಕಿಶೋರ್ ಹಾಗೂ ಧ್ರುಜ ಸರ್ಜಾ ಕಾಂಬಿನೇಷನ್ ನ ಮತ್ತೊಂದು ಹೈವೋಲ್ಟೇಜಜ್ ಸಿನಿಮಾ ದುಬಾರಿ ಘೋಷಣೆಯಾಗಿತ್ತು. ಈ ಸಿನಿಮಾ ಸ್ಕ್ರಿಪ್ಟ್ ಪೂಜೆಯೂ ಕೂಡ ನೆರವೇರಿತ್ತು. ಪೊಗರು ರಿಲೀಸ್ ಆಗಿ ಧೂಳೆಬ್ಬಿಸಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.
ಇನ್ನೇನು ಧ್ರವ ಫೋಕಸ್ ಕಂಪ್ಲೀಟ್ ಆಗಿ ದುಬಾರಿ ಮೇಲೆಯೇ ಇರಲಿದೆ ಎಂದು ಅಭಿಮಾನಿಗಳು ಕಾಯುತ್ತಾ ಇದ್ರು … ಆದ್ರೆ ಇದೀಗ ಧ್ರುವ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ. ಹೌದು ಸದ್ಯಕ್ಕೆ ಧ್ರುವ ದುಬಾರಿ ಸಿನಿಮಾಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದಾರೆ.
ಹೌದು… ಅಂದ್ಹಾಗೆ ದುಬಾರಿಗೆ ಆಕ್ಷನ್ ಕಟ್ ಹೇಳ್ತಿರುವ ನಂದಕಿಶೋರ್ ಮತ್ತೊಂದು ಪ್ರಾಜೆಕ್ಟ್ ನ ಕೈಗೆತ್ತಿಕೊಂಡಿದ್ದಾರೆ. ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜುಗೆ ನಂದಕಿಶೋರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಬ್ಬರ ಹೊಸ ಸಿನಿಮಾ ತಿಂಗಳಾಂತ್ಯಕ್ಕೆ ಪ್ರಾರಂಭವಾಗುತ್ತಿದೆ.
ಹೀಗಾಗಿ ಧ್ರುವ ಸರ್ಜಾ ಅವವರ ದುಬಾರಿ ಸಿನಿಮಾ ಶೂಟಿಂಗ್ ತಡವಾಗಿ ಆರಂಭವಾಗಲಿದೆ.
ಹಾಗಾದ್ರೆ ಧ್ರುವ ಮುಂದಿನ ಕಥೆ ಏನು..?
ಇನ್ನೂ ದುಬಾರಿ ಕೈಬಿಟ್ಟ ಮೇಲೆ ಧ್ರುವ ನೆಕ್ಸ್ಟ್ ಪ್ಲಾನ್ ಏನು.. ಯಾವ ಸಿನಿಮಾ ಮಾಡ್ತಾರೆ. ಯಾರ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಪ್ರಶ್ನೆಗಳು ಕಾಡುವುದು ಸಹಜ… ಆದ್ರೆ ಧ್ರುವ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಕೂಡ ಇದೆ. ಅಂದ್ಹಾಗೆ ಸ್ಟಾರ್ ಡೈರೆಕ್ಟರ್ ಪುರಿ ಜಗನ್ನಾಥ್ ಅವರು ಧ್ರುವ ಸರ್ಜಾ ಹೊಸ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗ್ತಿದೆ. ಹೌದು ಸದ್ಯಕ್ಕೆ ಲೈಗರ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ಪುರಿ ಧ್ರುವಾ ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡೋಕೆ ಮುಂದಾಗಿದ್ದಾರೆ ಅನ್ನೋ ಸುದ್ದಿ ವ್ಯಾಪವಾಗಿ ಚರ್ಚೆಯಾಗ್ತಿದೆ.
ಅಷ್ಟೇ ಅಲ್ಲ ಮತ್ತೊಂದೆಡೆ ಜಗ್ಗುದಾದ ಸಿನಿಮಾದ ನಿರ್ದೇಶಕರಾದ ರಾಘವೇಂದ್ರ ಹೆಗ್ಡೆ ಅವರ ಜೊತೆಗೂ ಧ್ರುವ ಸಿನಿಮಾ ಮಾಡಲಿದ್ದಾರೆ ಅನ್ನೋ ಸುದ್ದಿಗಳು ಹರಿದಾಡ್ತಿದೆ. ಒಟ್ಟಾರೆ ಮುಂದಿನ ದಿನಗಳಲ್ಲಿ ಆಕ್ಷನ್ ಪ್ರಿನ್ಸ್ ಯಾವ ಸಿನಿಮಾ , ಯಾರ ಜೊತೆಗೆ ಮಾಡಲಿದ್ದಾರೆ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಸ್ಟೈಲಿಶ್ ಸ್ಟಾರ್ ಬರ್ತ್ಡೇ ಗೆ ʻಪುಷ್ಪʼ ಟೀಸರ್ ಗಿಫ್ಟ್.