ಜನರಿಗೆ ಬಿಜೆಪಿ ಬೆಲೆ ಏರಿಕೆಯ ‘ದಿವಾಳಿ ಉಡುಗೊರೆ’ diwali saaksha tv
ಬೆಂಗಳೂರು : ಜನರಿಗೆ ಬಿಜೆಪಿ ಬೆಲೆ ಏರಿಕೆಯ ‘ದಿವಾಳಿ ಉಡುಗೊರೆ’ ನೀಡಿದೆ! ದೇಶಾದ್ಯಂತ ಜನರು ಬಿಜೆಪಿಗೆ ಸೋಲಿನ ‘ದಿವಾಳಿ ಉಡುಗೊರೆ’ ನೀಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಬಿಜೆಪಿಯನ್ನು ಕುಟುಕಿದೆ.
ಬೆಲೆ ಏರಿಕೆ ಮತ್ತು ಉಪಚುನಾವಣೆ ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಜನರಿಗೆ ಬಿಜೆಪಿ ಬೆಲೆ ಏರಿಕೆಯ ‘ದಿವಾಳಿ ಉಡುಗೊರೆ’ ನೀಡಿದೆ! ದೇಶಾದ್ಯಂತ ಜನರು ಬಿಜೆಪಿಗೆ ಸೋಲಿನ ‘ದಿವಾಳಿ ಉಡುಗೊರೆ’ ನೀಡಿದ್ದಾರೆ ಎಂದು ಕಿಡಿಕಾರಿದೆ.
ಇನ್ನು ಹಿಮಾಚಲ ಪ್ರದೇಶ, ರಾಜಸ್ಥಾನ್, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಜನತೆ ಅಭೂತಪೂರ್ವವಾಗಿ ಬೆಂಬಲಿಸಿದ್ದಾರೆ. ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.