ಬೆಂಬಲಿಗನ ತಲೆಗೆ ಪಟಾರ್ ಎಂದು ಹೊಡೆದ ಡಿಕೆಶಿ dk-shivakumar
ಮಂಡ್ಯ : ಹೆಗಲ ಮೇಲೆ ಕೈ ಹಾಕಿಕೊಳ್ಳಲು ಬಂದ ಬೆಂಬಲಿಗನ ತಲೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಟಾರ್ ಅಂತಾ ಬಾರಿಸಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ನಡೆದಿದೆ.
ಡಿ.ಕೆ.ಶಿವಕುಮಾರ್ ಕೆ.ಎಂ.ದೊಡ್ಡಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಂಸದ ಜಿ.ಮಾದೇಗೌಡ ಅವರ ಆರೋಗ್ಯವನ್ನು ವಿಚಾರಿಸಲು ಬಂದಿದ್ದರು.
ಆಸ್ಪತ್ರೆಯ ಒಳಗಡೆಗೆ ಬರುವ ಸಂದರ್ಭದಲ್ಲಿ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತ ಡಿ.ಕೆ.ಶಿವಕುಮಾರ್ ಹೆಗಲ ಮೇಲೆ ಕೈ ಹಾಕಲು ಪಯತ್ನಿಸಿದರು.
ಕೂಡಲೇ ಡಿ.ಕೆ.ಶಿವಕುಮಾರ್ ಕಾರ್ಯಕರ್ತನ ತಲೆಯ ಮೇಲೆ ಪಟಾರ್ ಎಂದು ಹೊಡೆದರು.
ಅಲ್ಲದೆ ನಿನಗೆ ಕಾಮನ್ ಸೆನ್ಸ್ ಇಲ್ಲವಾ? ಹೆಗಲ ಮೇಲೆ ಕೈ ಹಾಕ್ತಿಯಲ್ಲ..? ಏನೋ ಸಲಿಗೆ ಕೊಟ್ರೆ.. ಎಂದು ಡಿಕೆಶಿ ಗದರಿದರು. ಇದರಿಂದ ಅಲ್ಲಿದ್ದ ಕಾರ್ಯಕರ್ತರು ತಬ್ಬಿಬ್ಬಾದರು.