ಹೃದಯಾಘಾತದ ಲಕ್ಷಣಗಳು ಸಂಭವಿಸಿದ ತಕ್ಷಣ ಅನುಸರಿಸಬೇಕಾದ ಪ್ರಮುಖ ಸೂಚನೆಗಳು Saakshatv healthtips heart attack
ಮಂಗಳೂರು, ಜನವರಿ11: ‘ಹೃದಯಾಘಾತ’ ಹೆಸರನ್ನು ಕೇಳಿದಾಗ ಮೈ ನಡಗುತ್ತದೆ ಏಕೆಂದರೆ ಇತ್ತೀಚೆಗೆ ನಮ್ಮ ಸುತ್ತ ಮುತ್ತಲಿನ ಬಹಳಷ್ಟು ಜನರು ಹೃದಯಾಘಾತದಿಂದ ಮೃತಪಡುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ ರೋಗಿಯು ಅಥವಾ ಅವನ ಸುತ್ತಲಿನ ಜನರು ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಸರಿಯಾದ ಸಮಯದಲ್ಲಿ, ಕೆಲವು ಪ್ರಮುಖ ಸೂಚನೆಗಳನ್ನು ಅನುಸರಿಸಿದರೆ, ರೋಗಿಯ ಜೀವವನ್ನು ಉಳಿಸಬಹುದಾಗಿದೆ. Saakshatv healthtips heart attack
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ವಾಸ್ತವವಾಗಿ, ಹೃದಯಾಘಾತವು ವೈದ್ಯಕೀಯ ತುರ್ತುಸ್ಥಿತಿಯಾಗಿದೆ. ಇದರರ್ಥ ಒಬ್ಬ ವ್ಯಕ್ತಿಗೆ ಎಷ್ಟು ಬೇಗನೆ ಚಿಕಿತ್ಸೆ ನೀಡಲಾಗುತ್ತದೆಯೋ, ಅಷ್ಟು ಬೇಗ ಚಿಕಿತ್ಸೆಯನ್ನು ಪ್ರಾರಂಭಿಸುವ ಅವಶ್ಯಕತೆಯಿದೆ. ಹೃದಯಾಘಾತವಾದಾಗ ಆದಷ್ಟು ಬೇಗನೆ ಆಸ್ಪತ್ರೆಗೆ ತಲುಪಲು ಸಾಧ್ಯವಾಗದೆ ಇರುವ ಸಂದರ್ಭದಲ್ಲಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಕಾಳಜಿ ವಹಿಸುವುದರಿಂದ ರೋಗಿಯ ಜೀವವನ್ನು ಉಳಿಸಲು ಸಾಧ್ಯವಿದೆ.
ಆ ಪ್ರಮುಖ ವಿಷಯಗಳು ಯಾವುವು ಎಂದು ನೋಡೋಣ.
ಮೊದಲು ಹೃದಯಾಘಾತ ಏಕೆ ಬರುತ್ತದೆ ಎಂದು ತಿಳಿಯೋಣ
ನಮ್ಮ ಇಡೀ ದೇಹದಲ್ಲಿನ ರಕ್ತದ ಹರಿವು ಎಲ್ಲಾ ಸಮಯದಲ್ಲೂ ಇರುತ್ತದೆ. ಈ ರಕ್ತವನ್ನು ದೇಹದಲ್ಲಿ ಹರಿಯುವ ಕೆಲಸವನ್ನು ಹೃದಯ ಮಾಡುತ್ತದೆ. ಹೃದಯದ ಬಲ ಭಾಗವು ದೇಹದಲ್ಲಿರುವ ರಕ್ತವನ್ನು ಶ್ವಾಸಕೋಶಕ್ಕೆ ಪಂಪ್ ಮಾಡುತ್ತದೆ. ಇಲ್ಲಿಂದ ಆಮ್ಲಜನಕವು ರಕ್ತದಲ್ಲಿ ಕರಗುತ್ತದೆ ಮತ್ತು ನಂತರ ಆ ರಕ್ತವು ಹೃದಯದ ಎಡ ಭಾಗಕ್ಕೆ ಪ್ರವೇಶಿಸುತ್ತದೆ. ಹೃದಯದ ಎಡ ಭಾಗವು ಈ ಆಮ್ಲಜನಕಯುಕ್ತ ರಕ್ತವನ್ನು ಮತ್ತೆ ಪಂಪ್ ಮಾಡುತ್ತದೆ ಮತ್ತು ದೇಹದ ಎಲ್ಲಾ ಅಂಗಗಳಿಗೆ ಕಳುಹಿಸುತ್ತದೆ.
ರಕ್ತವು ಹೃದಯವನ್ನು ತಲುಪಲು ಸಾಧ್ಯವಾಗದಿದ್ದರೆ ಹೃದಯಾಘಾತವು ಉಂಟಾಗುತ್ತದೆ. ಇದರಿಂದಾಗಿ ಹೃದಯ ಕೋಶಗಳು ಸಾಯುತ್ತವೆ.
ಹೃದಯಾಘಾತದ ಸಂದರ್ಭದಲ್ಲಿ ಯಾವ ರೋಗಲಕ್ಷಣಗಳನ್ನು ಗುರುತಿಸಬಹುದು ?
ಹೃದಯಾಘಾತದಿಂದಾಗಿ, ಎದೆಯಲ್ಲಿ ತೀವ್ರವಾದ ನೋವು ಕಂಡುಬರುತ್ತದೆ. ಕೆಲವೊಮ್ಮೆ, ಎದೆ ನೋವು ಎಡ ಭುಜದ ನಡುವೆ ಚಲಿಸಬಹುದು.
ಇದಲ್ಲದೆ, ಬೆನ್ನಿನ ನಡುವೆ ಬೆನ್ನುಮೂಳೆಯ ಮೇಲೆ ತೀವ್ರವಾದ ನೋವನ್ನು ಸಹ ಅನುಭವಿಸಬಹುದು.
ಇದ್ದಕ್ಕಿದ್ದಂತೆ ಕಣ್ಣು ಕತ್ತಲೆ ಬಂದು ಬಿದ್ದು ಪ್ರಜ್ಞೆ ಕಳೆದುಕೊಳ್ಳುವ ಸಂಭವವಿದೆ.
ವ್ಯಕ್ತಿಯು ನಡೆಯುತ್ತಿದ್ದರೆ ಅಥವಾ ನಿಂತಿದ್ದರೆ, ಅವರು ಕೆಳಗೆ ಬೀಳಬಹುದು.
ತೀವ್ರ ನೋವಿನ ಜೊತೆಗೆ, ಮುಖ ಮತ್ತು ಹಣೆಯ ಮೇಲೆ ಬೆವರು ಪ್ರಾರಂಭವಾಗುತ್ತದೆ ಮತ್ತು ಬಲವಾದ ಶಾಖದ ಅನುಭವವಾಗಬಹುದು.
ಮೊಟ್ಟೆಗಳ ಸೇವನೆಯಿಂದ ಮೂತ್ರಪಿಂಡ (ಕಿಡ್ನಿ) ತೊಂದರೆ
ಹೃದಯಾಘಾತ ಸಂಭವಿಸಿದಾಗ ಏನು ಮಾಡಬೇಕು
ಮೇಲೆ ತಿಳಿಸಿದ ಯಾವುದೇ ರೋಗಲಕ್ಷಣಗಳನ್ನು ಅನುಭವಿಸಿದಾಗ ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳಿವೆ. ಸರಿಯಾದ ಸಮಯದಲ್ಲಿ ಈ ಸೂಚನೆಗಳನ್ನು ಅನುಸರಿಸುವುದರಿಂದ ಹೃದಯಾಘಾತದ ರೋಗಿಯ ಜೀವವನ್ನು ಉಳಿಸಬಹುದು
ಮೊದಲು ಆಂಬ್ಯುಲೆನ್ಸ್ಗೆ ಕರೆ ಮಾಡಿ. ರಾಷ್ಟ್ರೀಯ ತುರ್ತು ಸಂಖ್ಯೆ 102 ಗೆ ಕರೆ ಮಾಡಿ ಅಥವಾ ನಿಮ್ಮ ರಾಜ್ಯದ/ಆಸ್ಪತ್ರೆಯ ತುರ್ತು ಆಂಬ್ಯುಲೆನ್ಸ್ ಸೇವಾ ಸಂಖ್ಯೆಗೆ ಕರೆಮಾಡಿ. ನಿಮ್ಮ ಮೊಬೈಲ್ ನಲ್ಲಿ ತುರ್ತು ಆಂಬ್ಯುಲೆನ್ಸ್ ಸೇವಾ ಸಂಖ್ಯೆಯನ್ನು ಸೇವ್ ಮಾಡಿಟ್ಟುಕೊಳ್ಳುವುದು ತುರ್ತು ಸಂದರ್ಭದಲ್ಲಿ ಸಹಾಯ ಮಾಡುತ್ತದೆ.
ಯಾವುದೇ ಜಾಗದಲ್ಲಿ ಕುಳಿತುಕೊಂಡಿದ್ದರೂ, ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಕುರ್ಚಿ ಅಥವಾ ಆಸನ ಇದ್ದರೆ, ಅದರ ಮೇಲೆ ಕುಳಿತುಕೊಳ್ಳಿಸಿ. ಏನೂ ಇಲ್ಲದಿದ್ದರೆ, ನೆಲದ ಮೇಲೆ ಕುಳಿತುಕೊಳ್ಳಿಸಿ.
ಬಟ್ಟೆಗಳು ಬಿಗಿಯಾಗಿದ್ದರೆ, ತಕ್ಷಣ ಅವುಗಳನ್ನು ಸಡಿಲಗೊಳಿಸಿ. ಶರ್ಟ್ನ ಮೇಲಿನ ಗುಂಡಿಯನ್ನು ತೆರೆಯಿರಿ ಮತ್ತು ಕುತ್ತಿಗೆಗೆ ಟೈ ಧರಿಸುತ್ತಿದ್ದರೆ ಅದನ್ನು ಸಡಿಲಗೊಳಿಸಿ.
ಆಳವಾದ ಉಸಿರನ್ನು ಜೋರಾಗಿ ತೆಗೆದುಕೊಳ್ಳುವಂತೆ ರೋಗಿಗೆ ತಿಳಿಸಿ. ಉಸಿರನ್ನು ಎಣಿಸುತ್ತಾ, ಆಳವಾಗಿ ಮತ್ತು ವೇಗವಾಗಿ ಉಸಿರಾಡುವಂತೆ ತಿಳಿಸಿ. ಇದರಿಂದ ರೋಗಿಯ ಶ್ವಾಸಕೋಶಕ್ಕೆ ಆಮ್ಲಜನಕ ಸಿಗುತ್ತದೆ.
300 ಮಿಗ್ರಾಂ ಆಸ್ಪಿರಿನ್ ಮಾತ್ರೆಗಳನ್ನು ತಕ್ಷಣ ಅಗಿಯಲು ತಿಳಿಸಿ. ಒಬ್ಬ ವ್ಯಕ್ತಿಯು ಮೊದಲು ಹೃದಯಾಘಾತಕ್ಕೊಳಗಾಗಿದ್ದರೆ ಅಥವಾ ಅಧಿಕ ರಕ್ತದೊತ್ತಡಕ್ಕೆ ಬಲಿಯಾಗಿದ್ದರೆ, ಅವರು 2-3 ಆಸ್ಪಿರಿನ್ ಮಾತ್ರೆಗಳನ್ನು ತೆಗೆದುಕೊಳ್ಳಬೇಕು.
ಆಸ್ಪಿರಿನ್ ಟ್ಯಾಬ್ಲೆಟ್ ಇಲ್ಲದಿದ್ದರೆ, ನಿಮ್ಮ ಸುತ್ತಮುತ್ತಲಿನ ಜನರಿಂದ ಸಹಾಯವನ್ನು ಕೇಳಿ. ಆಸ್ಪಿರಿನ್ ಆದ ಕೂಡಲೇ 1 ಟ್ಯಾಬ್ಲೆಟ್ ನೈಟ್ರೊಗ್ಲಿಸರಿನ್ ಅನ್ನು ನಾಲಿಗೆ ಕೆಳಗೆ ಇರಿಸಿ ಮತ್ತು ಅದನ್ನು ಹೀರಿಕೊಳ್ಳಿ, ನೋವು ಕಡಿಮೆಯಾಗದಿದ್ದರೆ, 15 ನಿಮಿಷಗಳಲ್ಲಿ 1 ನೈಟ್ರೊಗ್ಲಿಸರಿನ್ ಟ್ಯಾಬ್ಲೆಟ್ ತೆಗೆದುಕೊಳ್ಳಿ .
ಆಂಬ್ಯುಲೆನ್ಸ್ ಬರುವವರೆಗೆ ಮತ್ತು ಆಸ್ಪತ್ರೆ ತಲುಪುವವರೆಗೆ ಕಾಳಜಿ ವಹಿಸಿ. ಆಸ್ಪತ್ರೆಗೆ ತಲುಪಿದ ನಂತರ, ವೈದ್ಯರು ಚಿಕಿತ್ಸೆ ಮತ್ತು ಪರೀಕ್ಷೆ, ಚಿಕಿತ್ಸೆಯನ್ನು ಪ್ರಾರಂಭಿಸಬಹುದು. ಈ ರೀತಿಯಾಗಿ ಸ್ವಲ್ಪ ಎಚ್ಚರಿಕೆಯಿಂದ ಹೃದಯಾಘಾತದ ಅಪಾಯವನ್ನು ನಿವಾರಿಸಬಹುದು. ನೀವು ಎಂದಾದರೂ ಹೃದ್ರೋಗ, ಅಧಿಕ ರಕ್ತದೊತ್ತಡ ಅಥವಾ ಕೊಲೆಸ್ಟ್ರಾಲ್ ಹೊಂದಿದ್ದರೆ, 300 ಮಿಗ್ರಾಂ ಆಸ್ಪಿರಿನ್ನ 2 ಮಾತ್ರೆಗಳು ಮತ್ತು 2 ನೈಟ್ರೊಗ್ಲಿಸರಿನ್ ಮಾತ್ರೆಗಳನ್ನು ನಿಮ್ಮ ಪರ್ಸ್ ಅಥವಾ ಜೇಬಿನಲ್ಲಿ ಸದಾ ಇರಿಸಿ.
ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ. ಇದು ವೈದ್ಯರ ಸಲಹೆಗೆ ಪರ್ಯಾಯವಲ್ಲ. ಆದ್ದರಿಂದ ವೈದ್ಯಕೀಯ ಸಲಹೆಯನ್ನು ನಿರ್ಲಕ್ಷಿಸಬೇಡಿ.
ಆರೋಗ್ಯ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಗೂಗಲ್ ನಲ್ಲಿ saakshatv healthtips ಎಂದು ಸರ್ಚ್ ಮಾಡಿ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ತೆಂಗಿನ ಎಣ್ಣೆಯ 7 ಉತ್ತಮ ಆರೋಗ್ಯ ಪ್ರಯೋಜನಗಳುhttps://t.co/pfEDWVh3JS
— Saaksha TV (@SaakshaTv) January 10, 2021
ಹ್ಯಾಕರ್ಗಳು ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿದರೆ ಅದಕ್ಕೆ ಬ್ಯಾಂಕ್ ಜವಾಬ್ದಾರಿhttps://t.co/9nRC0iZRbH
— Saaksha TV (@SaakshaTv) January 6, 2021