ಕೇರಳ ರೀತಿಯಲ್ಲಿ ಮೈಸೂರಲ್ಲೊಂದು ಘಟನೆ | ಸಿಡಿಮದ್ದು ಸ್ಫೋಟಕ್ಕೆ ನಾಯಿ ಛಿದ್ರ ಛಿದ್ರ nanjanagudu saaksha tv
ಮೈಸೂರು : ಕಳೆದ ವರ್ಷ ಕೇರಳದಲ್ಲಿ ಆನೆಯೊಂದು ಸಿಡಿಮದ್ದಿನ ಸ್ಫೋಟಕ್ಕೆ ಮೃತಪಟ್ಟ ರೀತಿಯಲ್ಲಿಯೇ ಮೈಸೂರ ಜಿಲ್ಲೆಯಲ್ಲೊಂದು ಘಟನೆ ನಡೆದಿದೆ.
ಜಿಲ್ಲೆಯ ನಂಜನಗೂಡು ತಾಲೂಕಿನ ಕಪ್ಪಸೋಗೆ ಗ್ರಾಮದಲ್ಲಿ ಸಿಡಿಮದ್ದು ಸ್ಫೋಟಗೊಂಡು ಸಾಕುನಾಯಿ ಛಿದ್ರ ಛಿದ್ರಗೊಂಡಿದೆ.
ಕಾಡು ಪ್ರಾಣಿಗಳ ಬೇಟೆಗೆ ಅಕ್ರಮವಾಗಿ ಇರಿಸಿದ್ದ ಸಿಡಿಮದ್ದು ಸ್ಫೋಟವಾಗಿದೆ.
ಪರಿಣಾಮ ಮಹೇಶ್ ಎಂಬವರಿಗೆ ಸೇರಿದ್ದ ಸಾಕುನಾಯಿಯ ಮುಖ ಛಿಧ್ರವಾಗಿದೆ.
ಇನ್ನು ಸ್ಫೋಟದ ಶಬ್ಧಕ್ಕೆ ಗ್ರಾಮಸ್ಥರು ಆತಂಕಗೊಂಡಿದ್ದು, ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಛಿದ್ರವಾದ ನಾಯಿಯ ಮೃತ ದೇಹ ಕಂಡುಬಂದಿದೆ.
ಘಟನೆ ಬಗ್ಗೆ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಅಕ್ರಮ ಸಿಡಿಮದ್ದು ಶೇಖರಣೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.