`ಸಿದ್ಧಗಂಗಾ ಮಠದ ಹೆಸರಲ್ಲಿ ಬರೋರಿಗೆ ಹಣ ಕೊಡಬೇಡಿ’
ತುಮಕೂರು : ಸಿದ್ದಗಂಗಾ ಮಠದ ಹೆಸರು ಹೇಳಿಕೊಂಡು ಸಾಕಷ್ಟು ಮಂದಿ ಮನೆ ಮನೆಗೆ ಬಂದು ಭಿಕ್ಷೆ ಬೇಡುವುದನ್ನ ನಾವು ನೋಡಿರುತ್ತೇವೆ. ಅವರಿಗೆ ಸಹಾಯವನ್ನ ಕೂಡ ಮಾಡಿರುತ್ತೇವೆ.
ಆದ್ರೆ ಹೀಗೆ ಮಠದ ಹೆಸರು ಹೇಳಿಕೊಂಡು ಹಣ ಕೇಳಲು ಬರುವವರಿಗೆ ಹಣ ಕೊಡಬೇಡಿ ಎಂದು ಸಿದ್ದಗಂಗಾ ಮಠದ ಆಡಳಿತಾಧಿಕಾರಿ ಎಸ್.ವಿಶ್ವನಾಥಯ್ಯ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, “ನಾವು ಮಠದಿಂದ ಬಂದಿದ್ದೇವೆ, ನಿಮಗೆ ಔಷಧಿ ಕೊಡುತ್ತೇವೆ”, “ದಾಸೋಹಕ್ಕೆ ದುಡ್ಡು ಕೇಳಲು ಬಂದಿದ್ದೇವೆ”,
“ಮಠದ ಅಂಧ ಶಾಲೆಗೆ ವಸ್ತುಗಳನ್ನು ಕೊಡಿಸಲಿಕ್ಕೆ ಹಣ ಕೊಡಿ” ಎಂದು ಕೆಲವರು ಕೇಳುತ್ತಿರುವುದಾಗಿ ಭಕ್ತರು ಮಾಹಿತಿ ನೀಡಿದ್ದಾರೆ.
ಹೀಗೆ ಮಠದ ಹೆಸರು ಹೇಳಿಕೊಂಡು ಹಣ ಕೇಳವವರಿಗೆ ಸಹಾಯ ಮಾಡಬೇಡಿ. ಹಾಗೇ ಬರುವವರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿ ಎಂದು ಎಸ್.ವಿಶ್ವನಾಥ್ಯ ತಿಳಿಸಿದ್ದಾರೆ.
ಹೀಗೆ ಮಠದ ಹೆಸರು ಹೇಳಿಕೊಂಡು ಎಸ್ಪಿಯವರಿಂದ ಸಬ್ ಇನ್ ಸ್ಪೆಕ್ಟರ್ ವರೆಗೂ ಎಲ್ಲರ ಬಳಿ ಹಣ ವಸೂಲಿ ಮಾಡಿದ್ದಾರೆ.
ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಇಂತಹ ವ್ಯಕ್ತಿಗಳು ಕಂಡು ಬಂದರೆ ಸಮೀಪದ ಪೊಲೀಸರಿಗೆ ಮಾಹಿತಿ ನೀಡಿ, ಸಿದ್ಧಗಂಗಾ ಮಠದಿಂದ ಯಾವುದೇ ವ್ಯಕ್ತಿಗಳನ್ನು ಕಳುಹಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.