ದ್ರಾವಿಡ್ ತಮ್ಮ ಸುರಕ್ಷಿತ ಬ್ಯಾಟಿಂಗ್ ನಂತಯೇ ಕೋಚ್ ಜವಾಬ್ದಾರಿ ನಿರ್ವಹಿಸ್ತಾರೆ : ಗವಾಸ್ಕರ್
ನವದೆಹಲಿ : ದ್ರಾವಿಡ್ ತಮ್ಮ ಸುರಕ್ಷಿತ ಬ್ಯಾಟಿಂಗ್ ನಂತಯೇ ಕೋಚ್ ಜವಾಬ್ದಾರಿ ನಿರ್ವಹಿಸ್ತಾರೆ ಎಂದು ಭಾರತೀಯ ಕ್ರಿಕೆಟ್ ನ ದಿಗ್ಗಜ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ರವಿಶಾಸ್ತ್ರಿ ಬಳಿಕ ಕ್ರಿಕೆಟ್ ಬ್ರಹ್ಮ ರಾಹುಲ್ ದ್ರಾವಿಡ್, ಟೀಂ ಇಂಡಿಯಾದ ದ್ರೋಣಾಚಾರ್ಯ ಸ್ಥಾನವನ್ನು ಅಲಂಕರಿಸಿದ್ದಾರೆ.
ಹೀಗಾಗಿ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳ ಜೊತೆ ಜೊತೆಗೆ ಸವಾಲುಗಳು ಇವೆ.
ಈ ಮಧ್ಯೆ ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್, ನೂತನ ಕೋಚ್ ರಾಹುಲ್ ಪರ ಬ್ಯಾಟ್ ಬೀಸಿದ್ದಾರೆ.
ಭಾರತದ ಪರ ರಾಹುಲ್ ದ್ರಾವಿಡ್ ಮೈದಾನದಲ್ಲಿ ಆಡುತ್ತಿದ್ದಾಗ, ನಾವೆಲ್ಲಾ ಆತ ಕ್ರೀಸ್ ನಲ್ಲಿ ಇರುವವರೆಗೂ ಭಾರತದ ಬ್ಯಾಟಿಂಗ್ ಸುರಕ್ಷಿತ ಮತ್ತು ಬಲಿಷ್ಠವಾಗಿರಲಿದೆ ಎಂದು ಚಿಂತಿಸುತ್ತಿದ್ದೆವು.
ಇದೇ ಕಾರಣದಿಂದ ರಾಹುಲ್ ತಮ್ಮ ಕೋಚ್ ಜವಾಬ್ದಾರಿಯನ್ನು ತಮ್ಮ ಬ್ಯಾಟಿಂಗ್ ಮಾದರಿಯಲ್ಲೇ ನಿರ್ವಹಿಸಿಕೊಂಡು ಹೋಗಲಿದ್ದಾರೆ ಎಂದು ನಂಬಿದ್ದೇನೆ ಎಂದಿದ್ದಾರೆ ಸುನಿಲ್ ಗವಾಸ್ಕರ್.
ಇನ್ನು ಇದೇ ಸರಣಿಯಿಂದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಟೀಂ ಇಂಡಿಯಾದ ಟಿ20 ತಂಡದ ಪೂರ್ಣ ಪ್ರಮಾಣದ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ಟಿ 20 ಸರಣಿ ಇಂದಿನಿಂದ ಆರಂಭವಾಗಲಿದೆ.
ನವೆಂಬರ್ 25ರಿಂದ 29 ಹಾಗೂ ಡಿಸೆಂಬರ್ 3ರಿಂದ 7ರವರೆಗೆ ಕಾನ್ಪುರ ಮತ್ತು ಮುಂಬೈನಲ್ಲಿ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ.