`ರಾಮ-ಲಕ್ಷ್ಮಣ ಜೋಡುಕರೆ ಮಂಗಳೂರು ಕಂಬಳ’ಕ್ಕೆ ಚಾಲನೆ
ಮಂಗಳೂರು : ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ನಡೆಯುವ ರಾಮ-ಲಕ್ಷ್ಮಣ ಜೋಡುಕರೆ ಮಂಗಳೂರು ಕಂಬಳಕ್ಕೆ ಚಾಲನೆ ಸಿಕ್ಕಿದೆ.
ಕಂಕನಾಡಿ ಬ್ರಹ್ಮಬೈದ್ಯರ್ಕಳ ಗರಡಿಯ ಅಧ್ಯಕ್ಷ ಚಿತ್ತರಂಚನ್ ರಾಸ್ ಈ ಕಂಬಳಕ್ಕೆ ಚಾಲನೆ ನೀಡಿದ್ದಾರೆ.
ಈ ಕಂಬಳವು ಮಂಗಳೂರು ನಗರದೊಳಗೆ ನಡೆಯುವ ಏಕೈಕ ಕಂಬಳವಾಗಿದೆ. ಕ್ಯಾ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಈ ಕಂಬಳ ನಡೆಯಲಿದೆ.
ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಕೃತಕವಾಗಿ ನಿರ್ಮಿಸಲಾಗಿರುವ 145 ಮೀ. ಉದ್ದದ ಜೋಡುಕರೆಯಲ್ಲಿ ಇಂದಿನಿಂದ ನಾಳೆ ಬೆಳಗ್ಗೆ 7 ಗಂಟೆಯವರೆಗೆ ಕಂಬಳ ನಡೆಯಲಿದೆ.
ಈ ಬಾರಿ ಆರು ವಿಭಾಗಗಳಲ್ಲಿ 120 ಜೊತೆ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ.
ಇನ್ನು ಈ ವೇಳೆ ಕೂಳೂರು ಬೀಡಿನ ವಜ್ರಕುಮಾರ ಕಣರ್ಂತ್ತಾಯ ಬಲ್ಲಾಳ, ಕಸಪಾ ದ.ಕ.ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ,
ಶ್ರೀರಾಮಕೃಷ್ಣ ಮಿಷನ್ ನ ಏಕಗಮ್ಯಾನಂದ ಸ್ವಾಮೀಜಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಆನುವಂಶಿಕ ಮುಕ್ತೇಸರ ಅನಂತಪದ್ಮನಾಭ ಆಸ್ರಣ್ಣ ಸೇರಿದಂತೆ ಇದ್ದರು.