ಭಾರೀ ಮಳೆ : ದುಬೈನಿಂದ ಚೆನ್ನೈಗೆ ಹೊಟಿದ್ದವರು ಬಂದಿಳಿದಿದ್ದು ಬೆಂಗಳೂರಿಗೆ..!
ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಭಾರತದ ಅನೇಕ ರಾಜ್ಯದಲ್ಲಿ ಧಾರಾಕಾರ ಮಳೆಯಾಗ್ತಿದ್ದು, ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ.. ಇನ್ನೂ ತಮಿಳಿನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.. ಚೆನ್ನೈನ ವಿಮಾನ ನಿಲ್ದಾಣದಲ್ಲಿ ಭಾರಿ ಮಳೆಯಿಂದಾಗಿ ಲ್ಯಾಂಡಿಂಗ್ ಸಮಸ್ಯೆ ಆಗಿದೆ.
ಹೀಗಾಗಿ ಚೆನ್ನೈನಲ್ಲಿ ವಿಮಾನ ಹಾರಾಟವನ್ನ ಸ್ಥಗಿತಗೊಳಿಸಲಾಗಿದೆ. ದುಬೈನಿಂದ ಚೆನ್ನೈಗೆ ಹೊರಟಿದ್ದ ಪ್ರಯಾಣಿಕರು ಇದರಿಂದಾಗಿ ಸಮಸ್ಯೆ ಎದುರಿಸುವಂತಾಗಿತ್ತು.. ನಂತರ ದುಬೈನಿಂದ ಚೆನ್ನೈಗೆ ಹೊರಟಿದ್ದ ವಿಮಾನವನ್ನು ಬೆಂಗಳೂರು ನಿಲ್ದಾಣಕ್ಕೆ ಕಳುಹಿಸಲಾಗಿದೆ. ಇವರೆಲ್ಲರೂ ಅನಿವಾರ್ಯವಾಗಿ ಚೆನ್ನೈ ಬದಲಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ..
ದುಬೈನಿಂದ ನೇರ ಚೆನ್ನೈಗೆ ಹೋಗಬೇಕಿದ್ದ ವಿಮಾನದಿಂದ ಬೆಂಗಳೂರಿನಲ್ಲಿ ಇಳಿದ ಪ್ರಯಾಣಿಕರನ್ನು ಕೊನೆಗೆ ಕೆಎಸ್ಆರ್ಟಿಸಿಯ ಐರಾವತ ಬಸ್ ಮೂಲಕ ಚೆನ್ನೈಗೆ ಕಳುಹಿಸಿಕೊಡಲಾಗಿದೆ. ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 40 ಮಂದಿ ಬಸ್ನಲ್ಲಿ ಚೆನ್ನೈಗೆ ತೆರಳಿದ್ದಾರೆ.