haveri ಜೂಜು ಅಡ್ಡೆ ಮೇಲೆ ದಾಳಿ : 2,25,000 ರೂ ವಶಕ್ಕೆ
ಹಾವೇರಿ : 2,25,000 ರೂ ಜಿಲ್ಲೆಯ ಹಾನಗಲ್ ತಾಲೂಕಿನ ಹುಲಗಿನಕೊಪ್ಪ ಗ್ರಾಮದ ಬಳಿ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ 8 ಜನರನ್ನು ಬಂಧಿಸಿ, ಅವರ ಬಳಿ ಇದ್ದ 2,25,000 ರೂಪಾಯಿ ಹಣವನ್ನು ವಶಪಡಿಸಿಕೊಂಡದ್ದಾರೆ.
ಗುರುಪ್ರಸಾದ್ ಪವಾಡಿ ಶೆಟ್ಟಿ, ಸುಮೀತ್ ಮಲ್ಲಾಪುರ, ಮಂಜುನಾಥ್ ಸುಣಗಾರ ಮತ್ತು ಗೋವಿಂದ ವಡ್ಡರ, ಅನ್ವರ್ ಚಿತ್ತೆವಾಲೆ, ಜಂದಿಸಾಬ ಬಳ್ಳಾರಿ, ಪ್ರಕಾಶ್ ಮಲ್ಲಿಗೆರೆ, ಮೊಹಮ್ಮದ್ ರಫೀ ಧಾರವಾಡ, ಬಂಧಿತರಾಗಿದ್ದು, ಇನ್ನೊಬ್ಬ ಆರೋಪಿ ಮಂಜುನಾಥ್ ಯಳ್ಳೂರ ಎಂಬಾತ ಪರಾರಿಯಾಗಿದ್ದಾನೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ ಆರು ಕಾರು, ನಾಲ್ಕು ಬೈಕ್ ಮತ್ತು 2,35,000 ರೂಪಾಯಿಗೂ ಅಧಿಕ ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.