ಉಕ್ರೇನ್ ರಾಜಧಾನಿ ಕೈವ್ ನಲ್ಲಿ ಭಾರತದ ರಾಯಭಾರಿ ಕಛೇರಿ ಮತ್ತೆ ಪುನರಾರಂಭ….
ಉಕ್ರೇನ್ ರಾಜಧಾನಿ ಕೈವ್ ಮೇಲೆ ರಷ್ಯಾದ ದಾಳಿ ಕಡಿಮೆಯದ ತಕ್ಷಣ ಹಲವು ದೇಶಗಳ ರಾಯಭಾರ ಕಚೇರಿಗಳು ಮತ್ತೆ ಕಾರ್ಯನಿರ್ವಹಿಸಲಾರಂಭಿಸಿವೆ. ಇಂದಿನಿಂದ ಕೈವ್ನಲ್ಲಿ ಭಾರತೀಯ ರಾಯಭಾರ ಕಚೇರಿಯೂ ಮತ್ತೆ ಆರಂಭವಾಗಲಿದೆ. ಇಲ್ಲಿಯವರೆಗೆ ವಾರ್ಸಾ (ಪೋಲೆಂಡ್) ನಿಂದ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದ ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮೇ 17 ರಿಂದ ಕೈವ್ನಲ್ಲಿ ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ರಷ್ಯಾ-ಉಕ್ರೇನ್ ಯುದ್ಧದ ಅಪ್ಡೇಟ್
ಮಾರಿಯುಪೋಲ್ನಲ್ಲಿರುವ ಅಜೋವೊಸ್ಟಲ್ ಸ್ಟೀಲ್ ಪ್ಲಾಂಟ್ ನಲ್ಲಿ ಸಿಲುಕಿದ್ದ ಸೈನಿಕರನ್ನ ಸ್ಥಳಾಂತರಿಸಲಾಗಿದೆ. ಸೋಮವಾರ ರಾತ್ರಿ, ಉಕ್ರೇನ್ ಮತ್ತು ರಷ್ಯಾದ ಪಡೆಗಳ ನಡುವೆ ನಡೆಯುತ್ತಿರುವ ಹೋರಾಟ ಕೊನೆಗೊಂಡಿದೆ. ಉಕ್ಕಿನ ಸ್ಥಾವರದಲ್ಲಿ ಸಿಲುಕಿದ್ದ 260 ಯೋಧರನ್ನ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ಎಲ್ಲ ಸೈನಿಕರನ್ನು ಅಭಿನಂದಿಸಿದ್ದಾರೆ.
ಸೋಮವಾರ ಸ್ವೀಡನ್ ತನ್ನ ನ್ಯಾಟೋ ಸದಸ್ಯತ್ವವನ್ನು ಅಧಿಕೃತವಾಗಿ ಘೋಷಿಸಿತು. ಇದರೊಂದಿಗೆ 200 ವರ್ಷಗಳ ಹಿಂದಿನ ಅಲಿಪ್ತ ನೀತಿಯನ್ನು ಕೈಬಿಟ್ಟಿದೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಯುರೋಪ್ನ ಭದ್ರತಾ ಕಾಳಜಿಯನ್ನು ಬದಲಾಯಿಸಿದೆ ಎಂದು ಪ್ರಧಾನಿ ಮ್ಯಾಗ್ಡಲೀನಾ ಆಂಡರ್ಸನ್ ಹೇಳಿದರು.
ಫಿನ್ಲ್ಯಾಂಡ್ ಮತ್ತು ಸ್ವೀಡನ್ ನ್ಯಾಟೋಗೆ ಸೇರ್ಪಡೆಗೊಳ್ಳುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೂಚಿಸಿದ್ದಾರೆ. ಸೋಮವಾರ, ಅವರು ನ್ಯಾಟೋ ವಿಸ್ತರಣೆಯಿಂದ ರಷ್ಯಾಕ್ಕೆ ಯಾವುದೇ ನೇರ ಬೆದರಿಕೆ ಇಲ್ಲ ಎಂದು ಹೇಳಿದರು. ಇದರೊಂದಿಗೆ ಈ ಪ್ರದೇಶದಲ್ಲಿ ಮಿಲಿಟರಿ ಮೂಲಸೌಕರ್ಯ ಅಭಿವೃದ್ಧಿಯನ್ನು ಮಾಡಿದರೆ, ಅದಕ್ಕೆ ತೀವ್ರ ಪ್ರತಿಕ್ರಿಯೆ ನೀಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.