ಸುಳ್ಳು ಅತ್ಯಾಚಾರ ಕೇಸ್ ನಲ್ಲಿ 31 ವರ್ಷ ಜೈಲಿನಲ್ಲಿದ್ದ – ಹೊರಬಂದ ನಂತರ ಕೋಟಿ ಕೋಟಿ ಹಣ ಗಳಿಸಿದರು..!
ಅಮೆರಿಕಾ : ಕೆಲವೊಮ್ಮೆ ನಿರಪರಾಧಿಗಳು , ಮುಗ್ಧರು ಸುಳ್ಳು ಆರೋಪದ ಮೇಲೆಜೈಲು ಸೇರಿ ವರ್ಷಗಳ ಕಾಲ ಜೈಲಲ್ಲೇ ಕೊಳೆಯುವಂತಾಗಿದೆ.. ಅಂತಹದ್ದೇ ಒಂದು ಪ್ರಕರಣ ಅಮೆರಿಕಾದಲ್ಲೂ ನಡೆದಿದೆ.. ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿ ಇಬ್ಬರು ವ್ಯಕ್ತಿಗಳು ಮಾಡದ ತಪ್ಪಿಗೆ 31 ವರ್ಷಗಳ ಕಾಲ ಸೆರೆವಾಸ ಅನುಭವಿಸಿ ಈಗ ಹೊರಬಂದಿದ್ದಾರೆ. 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಹೆನ್ರಿ ಮ್ಯಾಕ್ ಕಲಂ ಹಾಗೂ ಲಿಯೋನ್ ಬ್ರೌನ್ ಎಂಬ ಇಬ್ಬರು ಬರೋಬ್ಬರಿ 31 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಇದೀಗ ಇವರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖುಲಾಸೆಯಾಗಿದ್ದು, ನಾರ್ತ್ ಕೆರೊನಿಯಾ ಕೋರ್ಟ್ 75 ಮಿಲಿಯನ್ ( 550 ಕೋಟಿ ರೂ.) ಹಣವನ್ನು ಪರಿಹಾರವಾಗಿ ನೀಡಿದೆ.
1983ರಲ್ಲಿ 11 ವರ್ಷ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಹೆನ್ರಿ, ಲಿಯೋನ್ ರನ್ನು ಬಂಧಿಸಲಾಗಿತ್ತು. ಬಂಧನಕ್ಕೊಳಗಾದಾಗ ಹೆನ್ರಿಗೆ 19 ವರ್ಷ ಹಾಗೂ ಲಿಯೋನ್ಗೆ 15 ವರ್ಷ ವಯಸ್ಸಾಗಿತ್ತು. ಆಗ ಪ್ರಕರಣದ ತನಿಖೆ ನಡೆಸಿದ್ದ ಕೋರ್ಟ್ ಇಬ್ಬರಿಗೂ ಮರಣದಂಡನೆ ಶಿಕ್ಷೆಯನ್ನು ವಿಧಿಸಿತ್ತು. ಕೋರ್ಟ್ನ ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸಿದ ಬಳಿಕ 2014ರಲ್ಲಿ ಇಬ್ಬರೂ ಪ್ರಕರಣದಿಂದ ಖುಲಾಸೆಗೊಂಡಿದ್ದರು.
ಅಷ್ಟರಲ್ಲಿ ಆಗಲೇ ಬರೋಬ್ಬರಿ 31 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಇಬ್ಬರು ತಮ್ಮ ಯವ್ವನವನ್ನು ಕಂಬಿಗಳ ಹಿಂದೆಯೇ ಕಳೆದಿದ್ದರು. ಇನ್ನು ಡಿಎನ್ಎ ಪರೀಕ್ಷೆಯಲ್ಲಿ ಇಬ್ಬರು ಅತ್ಯಾಚಾರವೆಸಗಿಲ್ಲ ಎಂಬುವುದು ಸಾಬೀತಾಗಿತ್ತು.
ತಮ್ಮ ವಿರುದ್ಧದ ಸುಳ್ಳು ಆರೋಪ ಹಾಗೂ ಶಿಕ್ಷೆಯ ವಿರುದ್ಧ ಹೆನ್ರಿ, ಲಿಯೋನ್ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು. ಇಬ್ಬರಿಗೂ ಆದ ನೋವು, ನಷ್ಟವನ್ನು ಪರಿಗಣಿಸಿದ ನಾರ್ತ್ ಕೆರೊಲಿನಾ ಕೋರ್ಟ್ ಈಗ 75 ಮಿಲಿಯನ್ ಹಣವನ್ನು ಪರಿಹಾರವಾಗಿ ನೀಡಿದೆ. ಜೈಲಿನಲ್ಲಿ ಕಳೆದ ಪ್ರತಿ ವರ್ಷಕ್ಕೂ 1 ಮಿಲಿಯನ್ ನಂತೆ ತಲಾ 31 ಮಿಲಿಯನ್ ಜೊತೆ ಹೆಚ್ಚುವರಿಯಾಗಿ 13 ಮಿಲಿಯನ್ ಸೇರಿಸಿ ಒಟ್ಟು 75 ಮಿಲಿಯನ್ ಹಣವನ್ನು ಇಬ್ಬರಿಗೂ ಪರಿಹಾರವಾಗಿ ನೀಡಲಾಗಿದೆ.
ಕಪ್ಪು ವರ್ಣೀಯರ ವಿರುದ್ಧ ಪೂರ್ವಗ್ರಹ ಪೀಡಿತರಾಗಿ ತನಿಖೆ ನಡೆಸಿದ್ದರಿಂದಲೇ ಹೆನ್ರಿ, ಲಿಯೋನ್ ಮಾಡದ ತಪ್ಪಿಗೆ ಶಿಕ್ಷ ಅನುಭವಿಸುವಂತಾಗಿದ್ದು ಎಂದು ಹಲವರು ಆರೋಪಿಸಿದ್ದಾರೆ. ಇನ್ನು ಕೆಲವರು ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಜೈಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.