ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅಳಲು ತೋಡಿಕೊಂಡ ಚಿಮ್ಮನಕಟ್ಟಿ
ವಿಜಯಪುರ ಬಾಗಲಕೋಟೆ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲೇ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಚಿಮ್ಮನಕಟ್ಟಿ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ ಘಟನೆ ನಡೆದಿದೆ.ಗದ್ಗದಿತವಾಗಿ ಭಾಷಣ ಮಾಡ್ತಾ, ಸಿದ್ದು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಚಿಮ್ಮನಕಟ್ಟಿ. ಬಾದಾಮಿಯಲ್ಲಿ ಮತ್ತೆ ಸಿದ್ದರಾಮಯ್ಯ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಬಾದಾಮಿ ಕ್ಷೇತ್ರ ತ್ಯಾಗ ಮಾಡಿದ್ದ ಬಿ ಬಿ ಚಿಮ್ಮನಕಟ್ಟಿ. ಭಾಷಣದ ವೇಳೆ ನೀವು ಮತ್ತೇ ಹುಲಿ ಆಗ್ತೀರಿ ಎಂದ ಕಾರ್ಯಕರ್ತರು. ನಮ್ಮನ್ನ ಹುಲಿ ಹೋಗಿ ಇಲಿ ಮಾಡಿದ್ದೀರಿ. ಎಂದು ವೇದಿಕೆಯ ಮೇಲೆ ಗದ್ಗದಿತರಾಗಿ ಹೇಳಿದರು.
ಮುಂದಿನ ಸಲ ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ನಿಲ್ಲುತ್ತಾರೆ. ಅವರ ಪುತ್ರನ ಬಿಟ್ಟು ಸಿದ್ದರಾಮಯ್ಯ ಸ್ಪರ್ಧಿಸಿದ್ರೆ ಗೆಲ್ಲತ್ತಿದ್ರು.ವರುಣಾ ಕ್ಷೇತ್ರ ಮೈಸೂರು ಕ್ಷೇತ್ರದಲ್ಲಿ ಸ್ಪರ್ಧಿಸಬೇಕು. ಚಾಮುಂಡೇಶ್ವರಿ ಗೆಲ್ಲುವ ಯೋಗ್ಯತೆ ಇಲ್ಲ ಅಂದ್ರೆ ಯಾಕೆ ಸ್ಪರ್ಧಿಸಬೇಕಿತ್ತು. ಸ್ವಕ್ಷೇತ್ರದಲ್ಲೇ ಸಿದ್ದರಾಮಯ್ಯ ಗೆಲ್ಲಬೇಕೆಂದು ಚಾಲೆಂಜ್ ಹಾಕಿದ ಚಿಮ್ಮನಕಟ್ಟಿ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲಲು ಯೋಗ್ಯತೆ ಇಲ್ಲಾಂದ್ರೆ ಯಾಕೆ ಸ್ಪರ್ಧಿಸಬೇಕು. ಅದನ್ನ ಬಿಟ್ಟು ನಮಗೆ ಗಂಟು ಬಿದ್ದಾರ, ನಾನೇನು ಮಾಡಬೇಕು. ನಮ್ಮ ಪರಿಸ್ಥಿತಿ ಎಲ್ಲಿಗೆ ಬಂದಿದೆ ನೋಡ್ರಿ ಎನ್ನುತ್ತ, ಹುಲಿ ಹೋಗಿ ಇಲಿ ಆಗಿನಿ. ಎಂದು ಮಾತನಾಡುವ ಭರದಲ್ಲಿ ಸಿದ್ದರಾಮಯ್ಯಗೆ ಚಿಮ್ಮನಕಟ್ಪಿ. ಏಕವಚನದಲ್ಲೇ ಬೈದಾಡಿದರು ಇದರಿಂದ ವೇದಿಕೆ ಮೇಲಿದ್ದ ಸಿದ್ದರಾಮಯ್ಯಗೆ ತೀವ್ರ ಮುಜುಗರವುಂಟಾಯಿತು.
ಇದರಿಂದ ಸಭೆಯಲ್ಲಿ ಇಬ್ಬರ ಕಾರ್ಯಕರ್ತರ ಮಧ್ಯೆ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ನಂತರ ಚಿಮ್ಮನಕಟ್ಟಿ ಭಾಷಣದ ವೇಳೆ ಸಮಾಧಾನಪಡಿಸಲು ಕೈ ಮುಖಂಡರು ಮುಂದಾದರೂ…ಯಾವುದಕ್ಕೂ ಕ್ಯಾರೇ ಅನ್ನದೆ ಸಿದ್ದುಗೆ ಏಕವಚನದಲ್ಲಿಯೇ ಚಿಮ್ಮನಕಟ್ಟಿ ಬೈಯ್ದರು. ನಾನು ಬಾದಾಮಿಯಿಂದ ಸ್ಪರ್ಧಿಸಿ ಗೆದ್ದು ಎಂ ಎಲ್ ಎ ನೂ ಆಗ್ತೀನಿ. ಸಿಎಂ ಕೂಡ ಆಗ್ತೀನಿ ಎಂದು ಬಹಿರಂಗವಾಗಿ ಗುಡುಗಿದ್ದಾರೆ.