ಲಕ್ನೋ: ಕೋರ್ಟ್(Court) ನಲ್ಲಿಯೇ ಗ್ಯಾಂಗ್ ಸ್ಟರ್ (Gangster) ನನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕೈಸರ್ ಬಾಗ್ ಸ್ಥಳೀಯ ನ್ಯಾಯಾಲಯದಲ್ಲಿ ನಡೆದಿದೆ.
ಗ್ಯಾಂಗ್ ಸ್ಟರ್ ಮುಕ್ತರ್ ಸಹಚರನನ್ನು ಕೋರ್ಟ್ ಆವರಣದಲ್ಲಿಯೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ವಕೀಲರ (Lawyer) ವೇಷದಲ್ಲಿ ಬಂದಿದ್ದ ಹಂತಕರು ಏಕಾಏಕಿ ಗ್ಯಾಂಗ್ಸ್ಟರ್ ಸಂಜೀವ್ ಜೀವಾ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡು ಹಾರಿಸುತ್ತಿದ್ದಂತೆ ನೆಲಕ್ಕೆ ಕುಸಿದ ಆತನ ರಕ್ತಸ್ರಾವವನ್ನು ತಡೆಯಲು ಅಧಿಕಾರಿಗಳು ಪ್ರಯತ್ನಿಸಿದ್ದಾರೆ. ಆದರೆ, ಆತ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿಯ ಕಾಲಿಗೆ ಗುಂಡು ಬಿದ್ದಿದೆ.
ರಿವಾಲ್ವರ್ ಗಳನ್ನು ಅವರೆಲ್ಲ ಹೇಗೆ ನ್ಯಾಯಾಲಯಕ್ಕೆ ತಂದರು ಎಂಬುವುದೇ ಗೊತ್ತಿಲ್ಲ. ವಕೀಲರು ದಾಳಿಕೋರರಲ್ಲಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ. ಸಾವನ್ನಪ್ಪಿದ ಸಂಜೀವ್ ಜೀವಾ ಪಶ್ಚಿಮ ಯುಪಿಯಲ್ಲಿ ಕ್ರಿಮಿನಲ್ ಗ್ಯಾಂಗ್ ನಡೆಸುತ್ತಿದ್ದ. ಉತ್ತರಾಖಂಡ (Uttarakhand) ಹಾಗೂ ಉತ್ತರ ಪ್ರದೇಶದಲ್ಲಿ (Uttar Pradesh) ಆತನ ವಿರುದ್ಧ ಸುಮಾರು 50 ಕ್ರಿಮಿನಲ್ ಪ್ರಕರಣಗಳಿವೆ. ಹಲವಾರು ವರ್ಷಗಳಿಂದ ಆತ ಜೈಲಿನಲ್ಲಿಯೇ ಇದ್ದ ಎನ್ನಲಾಗಿದೆ.