ದೇವರು ಅನ್ಯಾಯ ಮಾಡಿದ್ದಾನೆ : ಚಿರಂಜೀವಿ Chiranjeevi saaksha tv
ಬೆಂಗಳೂರು : ಪುನೀತ್ ಸಾವಿನ ಸುದ್ದಿಯನ್ನ ಜೀರ್ಣಿಸಿಕೊಳ್ಳೋಕೆ ಆಗುತ್ತಿಲ್ಲ. ಇದು ಬಹಳ ಅನ್ಯಾಯ ಎಂದು ಟಾಲಿವುಡ್ ಖ್ಯಾತ ನಟ ಚಿರಂಜೀವಿ ಪುನೀತ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ತೆಲುಗು ಖ್ಯಾತ ನಟರಾದ ಚಿರಂಜೀವಿ, ವಿಕ್ಟರಿ ವೆಂಕಟೇಶ್, ಶ್ರೀಕಾಂತ್, ಅಲಿ ಪುನೀತ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅಂತಿಮ ದರ್ಶನ ಪಡೆದ ಬಳಿಕ ಶಿವರಾಜ್ ಕುಮಾರ್ ಅವರಿಗೆ ಚಿರಂಜೀವಿ ಧೈರ್ಯ ತುಂಬಿದ್ದಾರೆ ಹಾಗೂ ರಾಜ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.
ಬಳಿಕ ಮಾತನಾಡಿದ ಚಿರಂಜೀವಿ, ರಾಜ್ ಕುಮಾರ್ ಅವರ ಕುಟುಂಬದ ಎಲ್ಲಾ ಕಾರ್ಯಕ್ರಮಕ್ಕೆ ನನ್ನ ಆಹ್ವಾನಿಸ್ತಿದ್ರು. ಪುನೀತ್ ಸಾವಿನ ಸುದ್ದಿಯನ್ನ ಜೀರ್ಣಿಸಿಕೊಳ್ಳೋಕೆ ಆಗುತ್ತಿಲ್ಲ. ಇದು ಬಹಳ ಅನ್ಯಾಯ. ದೇವರು ಪುನೀತ್ ವಿಚಾರದಲ್ಲಿ ಬಳಹ ಅನ್ಯಾಯ ಮಾಡಿದ್ದಾರೆ. ಆ ದೇವರೇ ರಾಜ್ ಕುಮಾರ್ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಬೇಕು. ನಾನು ಯಾವಾಗಲೇ ಬೆಂಗಳೂರಿಗೆ ಬಂದರೂ ಪುನೀತ್ ಮನೆಗೆ ಭೇಟಿ ನೀಡುತ್ತಿದೆ. ಪುನೀತ್ ಜೊತೆ ಮಾತನಾಡುತ್ತಿದೆ ಎಂದು ಸ್ಮರಿಸಿದರು.