ಇನ್ಮುಂದೆ ಜಿ.ಟಿ.ದೇವೇಗೌಡರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ : ಹೆಚ್ಡಿಕೆ H D Kumaraswamy
ಮೈಸೂರು : ನಾನು ರಾಜಕೀಯದಲ್ಲಿರುವವರೆಗೂ ಯಾವುದೇ ಕಾರಣಕ್ಕೂ ಜಿ.ಟಿ.ದೇವೇಗೌಡರನ್ನ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಜಿ.ಟಿ.ದೇವೇಗೌಡ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮೈಮುಲ್ ಚುನಾವಣೆ ಹಿನ್ನೆಲೆ ಹೆಚ್ ಡಿ ಕುಮಾರಸ್ವಾಮಿ ಅವರು ಹುಣಸೂರು, ಪಿರಿಯಾಪಟ್ಟಣ ಹಾಗೂ ಹೆಚ್ ಡಿ ಕೋಟೆ ಭಾಗದಲ್ಲಿ ಪ್ರಚಾರ ನಡೆಸಿದ್ರು.
ಈ ವೇಳೆ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಅವರು, ಶಾಸಕ ಜಿ ಟಿ ದೇವೆಗೌಡ ಅವರಿಗೆ ಅಧಿಕಾರ ಕೊಟ್ಟು ಪಕ್ಷ ಈ ಸ್ಥಿತಿಗೆ ತಲುಪಿದೆ.
ಈಗಾಗಲೇ ಅವರು ಪಕ್ಷದಿಂದ ಹೊರಗೆ ಇದ್ದಾರೆ. ಮುಂದೆ ನಾನು ರಾಜಕೀಯದಲ್ಲಿ ಇರುವವರೆಗೂ ಯಾವ ಕಾರಣಕ್ಕೂ ಪಕ್ಷಕ್ಕೆ ಅವರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಶಪಥ ಮಾಡಿದರು.
ಇನ್ನು ಜಿಟಿಡಿ ಮತ್ತು ಅವರ ಮಗ ದೊಡ್ಡ ನಾಯಕರಾಗಿದ್ದಾರೆ, ಅವರ ಸಹವಾಸ ಬೇಡ. ಪಕ್ಷವನ್ನು ನಾನು ಕೆಳಮಟ್ಟದಿಂದ ಕಟ್ಟುತ್ತೇನೆ ಎಂದು ಕಿಡಿಕಾರಿದ್ರು.