ನ್ಯಾಯಾಧೀಶರು ಸರ್ವಜ್ಞರೇ : ಸಿ.ಟಿ.ರವಿಗೆ ಹಳ್ಳಿಹಕ್ಕಿ ಟಾಂಗ್
ಮೈಸೂರು : ನ್ಯಾಯಾಧೀಶರುಗಳೇನು ಸರ್ವಜ್ಞರಾ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆಗೆ ನ್ಯಾಯಾಧೀಶರನ್ನು ನಾವೆಲ್ಲ ಸರ್ವಜ್ಞರು ಅಂತಲೇ ಭಾವಿಸಿದ್ದೇವೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕ ಹೆಚ್. ವಿಶ್ವನಾಥ್ ಟಾಂಗ್ ನೀಡಿದ್ದಾರೆ.
ಲಸಿಕೆ ವಿಚಾರವಾಗಿ ನಿನ್ನೆ ನ್ಯಾಯಾಧೀಶರೇನೋ ಸರ್ವಜ್ಞರಲ್ಲ ಎಂದು ಸಿ.ಟಿ.ರವಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವಿಶ್ವನಾಥ್, ನ್ಯಾಯಾಧೀಶರನ್ನು ನಾವೆಲ್ಲ ಸರ್ವಜ್ಞರು ಅಂತಲೇ ಭಾವಿಸಿದ್ದೇವೆ.
ನ್ಯಾಯಾಧೀಶರ ಆದೇಶವನ್ನು ಪ್ರಶ್ನಿಸಿವುದು ನ್ಯಾಯಂಗ ನಿಂದನೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇನ್ನು ಜಡ್ಜ್ಗಳು ಸರ್ವಜ್ಞರು ಅನ್ನುವ ಭಾವನೆ ಇದೆ. ಕೇಂದ್ರ, ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯಗಳೇ ಸೂಚನೆ ಕೊಡುತ್ತಿವೆ.
ಚಾಮರಾಜನಗರ ಘಟನೆಯಲ್ಲಿ ಹೈಕೋರ್ಟ್ ಮಧ್ಯ ಪ್ರವೇಶ ಮಾಡಿದ್ದಕ್ಕೆ ಮೈಸೂರಿಗೆ ಗೌರವ ಬಂತು.
ಒಂದು ವೇಳೆ ಅಧಿಕಾರಿಗಳು ಬಂದಿದ್ದರೆ ಸತ್ತವರು ಮೂರೇ ಜನ, ಮೈಸೂರು ಮತ್ತು ಚಾಮರಾಜನಗರ ಇಬ್ಬರೂ ಕಾರಣ ಅಂತ ವರದಿ ಬರ್ತಿತ್ತು. ಹೀಗಾಗಿ ನ್ಯಾಯಾಂಗಕ್ಕೆ ನನ್ನ ಧನ್ಯವಾದ ಇದೆ ಎಂದು ತಿಳಿಸಿದರು.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.