ಹಾಸನ : ಬೈದು ಮನೆಯಿಂದ ಹೊರ ಹಾಕಿದ್ದಕ್ಕೆ ಅಣ್ಣನನ್ನೇ ಕೊಂದ ತಮ್ಮ
ಹಾಸನ : ಕುಡಿತ ಮತ್ತಿನಲ್ಲಿ ಬೈದು ಮನೆಯಿಂದ ಹೊರ ಹಾಕಿದ್ದಕ್ಕೆ ಅಣ್ಣನನ್ನೇ ತಮ್ಮ ಕೊಲೆ ಮಾಡಿರುವ ಘಟನೆ ಹಾಸನದ ಸಕಲೇಶಪುರ ತಾಲೂಕಿನ ದೇವಾಲದಕೆರೆ ಗ್ರಾಮದಲ್ಲಿ ನಡೆದಿದೆ. 47 ವರ್ಷದ ರವಿ ಮೃತ ವ್ಯಕ್ತಿಯಾಗಿದ್ದು, 29 ವರ್ಷದ ಪ್ರದೀಪ್ ಆರೋಪಿಯಾಗಿದ್ದಾನೆ.
ವಿವರಗಳು : ಈ ಇಬ್ಬರು ಕಡೂರು ಮೂಲದವರಾಗಿದ್ದು, ಸುದೀಶ್ ಎಂಬುವವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಅದರಂತೆ ನಿನ್ನೆ ಇಬ್ಬರು ಕೆಲಸ ಮುಗಿಸಿ ಮದ್ಯಪಾನ ಮಾಡಿ ಮನೆಗೆ ನಾನ್ ವೆಜ್ ತಂದ್ದು, ಅಡುಗೆ ಮಾಡಿ ಊಟ ಮುಗಿಸಿದ್ದಾರೆ.
ಇನ್ನೇನು ಮಲಗುವ ಟೈಂನಲ್ಲಿ ರವಿ ಯಾವಾಗಲೂ ಅಡುಗೆ ಪದಾರ್ಥಗಳನ್ನ ನಾನೆ ತರುತ್ತೇನೆ. ನೀನು ರಾಗಿ ಹಿಟ್ಟು ಕೂಡ ತಂದಿಲ್ಲ ಅಂತಾ ಬಾಯಿಗೆಎ ಬಂದಂತೆ ಬೈದಿದ್ದಾನೆ. ಅಲ್ಲದೆ ಪ್ರದೀಪನನ್ನು ಮನೆಯಿಂದ ಹೊರಹಾಕಿ ಪಾತ್ರೆಗಳಿಂದ ಹಲ್ಲೆ ಮಾಡಿದ್ದಾನೆ.
ಇದರಿಂದ ಕೋಪಗೊಂಡ ಪ್ರದೀಪ್ ಅಲ್ಲೇ ಇದ್ದ ದೊಣ್ಣೆಯಿಂದ ರವಿ ತಲೆಯ ಭಾಗಕ್ಕೆ ಜೋರಾಗಿ ಹೊಡೆದಿದ್ದಾನೆ. ತಲೆಗೆ ದೊಣ್ಣೆಯಿಂದ ಹೊಡೆಯುತ್ತಿದ್ದಂತೆ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪ್ರದೀಪ್ ರಾತ್ರಿ ಎಲ್ಲಾ ಶವದ ಪಕ್ಕದಲ್ಲಿಯೇ ಕುಳಿತಿದ್ದಾನೆ. ಇಂದು ಬೆಳಿಗ್ಗೆ ತೋಟದ ಮಾಲೀಕ ಕೆಲಸಕ್ಕೆ ಕರೆಯಲು ಮನೆಯ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಸುದೀಶ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಪ್ರದೀಪ್ ನನ್ನು ಬಂಧಿಸಿದ್ದಾರೆ. ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಲಾಗಿದೆ.