`ನಾನು ಪರಿಶುದ್ಧವಾಗಿದ್ದೇನಿ’ ಎಂದು ಹೇಳಿದ್ಯಾಕೆ ಹೆಚ್ ಡಿಕೆ..?
ಮೈಸೂರು : ಕೆಲವರು ಮಾಜಿ ಸಿಎಂಗಳ ಸಿಡಿ ಇದೆ ಅಂತಾ ಹೇಳುತ್ತಿದ್ದಾರೆ. ಅದು ಯಾವ ಮಾಜಿ ಸಿಎಂ ಅಂತಾ ಬಹಿರಂಗಪಡಿಸಲಿ.
ನಾನಿದ್ದರೂ ಅದನ್ನ ಬಹಿರಂಗವಾಗಲಿ. ಈ ವಿಚಾರದಲ್ಲಿ ನಾನು ಪರಿಶುದ್ಧವಾಗಿದ್ದೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ವಿಡಿಯೋ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಈ ಸಿಡಿ ಎರಡು ಮೂರು ತಿಂಗಳ ಹಿಂದೆಯೇ ಬರಬೇಕಿತ್ತು.
ಸಿಡಿಗಾಗಿ ಐದು ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಸಿಡಿ ಹೊರತಂದವರನ್ನು ಮೊದಲು ಬಂಧಿಸಿ ಅವರನ್ನು ವಿಚಾರಣೆಗೆ ಒಳಪಡಿಸಬೇಕು.
ಹಣಕ್ಕಾಗಿ ಇಂತಹ ದಂಧೆಗಳು ನಡೆಯುತ್ತಿವೆ. ಇಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ರು.
ಇನ್ನು ಕೆಲವರು ಮಾಜಿ ಮುಖ್ಯಮಂತ್ರಿಗಳ ಸಿಡಿ ಇದೆ ಅಂತಾ ಹೇಳುತ್ತಿದ್ದಾರೆ. ಯಾರೊ ಮಾಜಿ ಸಿಎಂ ರೆಸಾರ್ಟ್ ಹೋಗಿ ಬರುತ್ತಿರುತ್ತಾರೆ ಅಂತ ಹೇಳಿಕೆ ನೀಡಿದ್ದಾರೆ.
ಅದು ಯಾರು ಎಂಬುದನ್ನು ಬಹಿರಂಗಪಡಿಸಲಿ. ನಾನೂ ಇದ್ದರು ಅದನ್ನು ಬಹಿರಂಗವಾಗಲಿ. ಆದರೆ, ಜನಗಳು ನಮ್ಮನ್ನು ಅನುಮಾನದಿಂದ ನೋಡುವಂತಾಗಿದೆ. ನಾನು ಈ ವಿಚಾರದಲ್ಲಿ ಪರಿಶುದ್ಧವಾಗಿದ್ದೇನಿ ಎಂದರು.