ಭಾರತದಲ್ಲಿವಾಸಿಸುವ ಹಿಂದು ಮತ್ತು ಮುಸ್ಲಿಂ ಡಿಎನ್ ಎ ಒಂದೇ : ಸುಬ್ರಹ್ಮಣಿಯನ್ ಸ್ವಾಮಿ
ಮೈಸೂರು : ಹಿಂದು ಮತ್ತು ಮುಸ್ಲಿಂ ಸೇರಿದಂತೆ ಭಾರತದಲ್ಲಿರುವ ಎಲ್ಲರ ಡಿಎನ್ ಎ ಒಂದೇ ಆಗಿವೆ. ಇದು ಹೈದರಬಾದದಿನ ಮೈಕ್ರೋಬಯಾಲಜಿ ಪ್ರಯೋಗಾಲಯದಲ್ಲಿ ಇದು ಸಾಬೀತಾಗಿದೆ ಎಂದು ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.
ಮೈಸೂರು ಹಿಂದೂ ಫೋರಂ ವತಿಯಿಂದ ಸದರ್ನ್ ಸ್ಟಾರ್ ಹೋಟೆಲ್ನಲ್ಲಿ ಶನಿವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು ಮುಸ್ಲಿಂರು ಹೊರ ದೇಶಗಳಿಂದ ಬಂದಿದ್ದಲ್ಲ. ಭೂಮಿ ಹುಟ್ಟಿದಾಗಿನಿಂದಲೂ ಅವರು ಭಾರತದಲ್ಲೇ ಇದ್ದಾರೆ. ಭಾರತ ಹಿಂದೂ ರಾಷ್ಟ್ರ ಎಂದು ತಿಳಿಸಿದರು.
ಅಲ್ಲದೇ ರಾಮಜನ್ಮಭೂಮಿಯನ್ನು ನಾವು ಹೋರಾಟ ಮಾಡಿ ಪಡೆದಿದ್ದೇವೆ. ನಂತರ ನಮ್ಮ ಮುಂದಿನ ಗುರಿ ಕೃಷ್ಣಜನ್ಮಭೂಮಿ ಹಾಗೂ ಕಾಶಿವಿಶ್ವನಾಥ ಮಂದಿರಗಳಾಗಿವೆ. ಒಂದೇ ಒಂದು ಗುಂಡು ಹಾರದ ಹಾಗೆ ರಾಮಮಂದಿರವನ್ನು ಕಟ್ಟುತ್ತಿದ್ದೇವೆ.
ಹಾಗೆಯೇ, ಕೃಷ್ಣಜನ್ಮಭೂಮಿಯಾದ ಮಥುರಾ ಹಾಗೂ ಕಾಶಿಯಲ್ಲಿರುವ ವಿಶ್ವನಾಥ ಮಂದಿರ ವಿಚಾರವನ್ನು ಹಿಂದೂ-ಮುಸ್ಲಿಂ ವಿವಾದಗಳನ್ನೂ ಶಾಂತಿಯುತವಾಗಿಯೇ ಬಗೆಹರಿಸುತ್ತೇವೆ. ಅಲ್ಲಿಯೂ ಶಾಂತಿಯುತ ವಾತಾವರಣ ನಿರ್ಮಾಣ ಮಾಡುತ್ತೇವೆ ಎಂದರು.
ಇನ್ನೂ ಭಾರತ ಚೀನಾವನ್ನು ಸೋಲಿಸುವವರೆಗೂ ಭಾರತ ಸೂಪರ್ ಪವರ್ ಆಗಲು ಸಾಧ್ಯವೇ ಇಲ್ಲ. ಭಾರತೀಯರು ಸರ್ಕಸ್ನಲ್ಲಿನ ಸಿಂಹದಂತಿರುವುದನ್ನು ಇನ್ನಾದರೂ ಬಿಡಬೇಕು. ಕಾಡಿನ ಸಿಂಹದ ಹಾಗೆ ವರ್ತಿಸಬೇಕು ಎಂದು ಸಲಹೆ ನೀಡಿದರು.