ಆದಿ ಸುಬ್ರಹ್ಮಣ್ಯ ದೇವಸ್ಥಾನ ವಿಶೇಷ ಜಾತ್ರೆಯ ಚರಿತ್ರೆ ಮಾಹಿತಿ
ದೇವಸ್ಥಾನದ ಪುರಾಣ ಚರಿತ್ರೆಯನ್ನು ನೋಡಿದಾಗ ಮುಖ್ಯದೇವರಾದ ಸುಬ್ರಹ್ಮಣ್ಯ ಕುಮಾರಸ್ವಾಮಿ ಎಂದು ಪ್ರಖ್ಯಾತಿ ಹೊಂದಿದ್ದು ತಾರಕಾಸುರನ ವಧೆ ಆದ ನಂತರ ಈ ಪುಣ್ಯ ನೆಲದಲ್ಲಿ ನೆಲೆಯಾದ ಕತೆಯಿದೆ. ಇನ್ನೊಂದು ಕತೆ ಪ್ರಕಾರ ಹಾವುಗಳ ರಾಜ ವಾಸುಕಿಯು ಗರುಡನಿಂದ ಆಕ್ರಮಣಕ್ಕೆ ಒಳಗಾದಾಗ ಶಿವನಿಂದ ಈ ಜಾಗದಲ್ಲಿ ರಕ್ಷಣೆ ಪಡೆದುದರಿಂದ ‘ನಾಗಾರಾಧನೆ’ ಇಲ್ಲಿ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಸ್ಥಳೀಯ ಜನರಲ್ಲಿ ಪ್ರಚಲಿತವಾಗಿರುವ ಕತೆಯ ಪ್ರಕಾರ ‘ಕುಕ್ಕ ಮತ್ತು ಲಿಂಗ’ ಎಂಬ ಇಬ್ಬರು ಆದಿವಾಸಿ ಮಲೆಕುಡಿಯರು ಕಾಡಿಗೆ ತೆರಳಿದ ಸಂದರ್ಭದಲ್ಲಿ ಒಂದು ಸರ್ಪವು ಕಾಡಿಚ್ಚಿನಿಂದ ಸುತ್ತುವರಿಯಲ್ಪಟ್ಟು ರಕ್ಷಣೆಗೆ ಇವರಲ್ಲಿ ಬೇಡಿಕೊಂಡಿತು. ಇವರಿಬ್ಬರು ತಮ್ಮ ಬಿಲ್ಲುಗಳ ಸಹಾಯದಿಂದ ಈ ಸರ್ಪವನ್ನು ಬೆಂಕಿಯಿಂದ ರಕ್ಷಿಸಿ ಕಾಡಿನ ಬುಡಭಾಗದ ನೀರಿನ ಹತ್ತಿರ ಬಯಲು ಪ್ರದೇಶದಲ್ಲಿ ತಂದು ಬಿಟ್ಟರು. ಅಲ್ಲಿ ಆ ಸರ್ಪವು ನೆಲೆಯೂರಿ ಆ ಪ್ರದೇಶವು ಆದಿ ಸುಬ್ರಹ್ಮಣ್ಯ ಎಂಬ ಹೆಸರಿನಿಂದ ಪ್ರಖ್ಯಾತಿಯಾಯಿತು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಈಗಲೂ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಲೆಕುಡಿಯರು ಕುಕ್ಕೆಲಿಂಗ ಜಾತ್ರೆಯನ್ನು ವಿಶೇಷ ರೀತಿಯಲ್ಲಿ ನಡೆಸುತ್ತಿದ್ದಾರೆ.