ಮುತ್ತಿನ ರಾಶಿ ಮೂರುಭಾಗ ಆದೀತಲೆ ಪರಾಕ್ : ಮೈಲಾರಲಿಂಗೇಶ್ವರನ ಭವಿಷ್ಯವಾಣಿ ( mailaralingeshwara)
ಹೊಸಪೇಟೆ : ಮುತ್ತಿನ ರಾಶಿ ಮೂರುಭಾಗ ಆದೀತಲೆ ಪರಾಕ್ ಎಂದು ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಕಾರ್ಣಿಕದ ಗೊರವಯ್ಯ ರಾಮಪ್ಪ ಭವಿಷ್ಯ ನುಡಿದಿದ್ದಾರೆ.
ಕೊರೊನಾ ಹಿನ್ನೆಲೆ ಈ ಬಾರಿಯ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವವನ್ನು ಸರಳವಾಗಿ ಆಚರಣೆ ಮಾಡಲಾಗಿದೆ.
ಎಂದಿನಂತೆ ಇಂದು ಕಾರ್ಣಿಕದ ಗೊರವಯ್ಯ ರಾಮಪ್ಪ ಭವಿಷ್ಯ ನುಡಿದಿದ್ದು, ಈ ಬಾರಿ ಮುತ್ತಿನ ರಾಶಿ ಮೂರು ಭಾಗ ಆದೀತಲೇ ಪರಾಕ್ ಅಂತ ಹೇಳಿದ್ದಾರೆ.
ಇನ್ನು ಕಾರ್ಣಿಕದ ಗೊರವಯ್ಯ ರಾಮಪ್ಪರ ಮುತ್ತಿನ ರಾಶಿ ಮೂರುಭಾಗ ಆದೀತಲೆ ಪರಾಕ್ ಭವಿಷ್ಯವಾಣಿವನ್ನು ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ಛಿದ್ರವಾಗುವ ಸಾಧ್ಯತೆ ಇದೆ ಎಂದು ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ವ್ಯಾಖ್ಯಾನಿಸಿದ್ದಾರೆ.
ಈ ಬಾರಿ ನಾಡಿಗೆ ಉತ್ತಮ ಮಳೆ ಬೆಳೆ ಸಂವೃದ್ದಿಯಿಂದ ಕೂಡಿರುತ್ತೆ. ರಾಜಕೀಯ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ.
ರಾಜ್ಯ ಅಥವಾ ಕೇಂದ್ರ ಸರ್ಕಾರ ಛಿದ್ರವಾಗುವ ಸಾಧ್ಯೆತೆಗಳಿವೆ ಎಂದು ವೆಂಕಪ್ಪಯ್ಯ ಒಡೆಯರ್ ವ್ಯಾಖ್ಯಾನಿಸಿದ್ದಾರೆ.